Advertisement

ಏನ್ರೋ ನನಗೆ ಘೇರಾವ್ ಹಾಕ್ತೀರಾ;BJP ಪ್ರತಿಭಟನಾಕಾರರಿಗೆ ಡಿಕೆಶಿ ಧಮ್ಕಿ

01:48 PM Feb 25, 2017 | Team Udayavani |

ಕಲಬುರಗಿ: ಕಾಂಗ್ರೆಸ್ ಹೈಕಮಾಂಡ್ ಗೆ ಕಪ್ಪ ನೀಡಿರುವ ಡೈರಿಯಲ್ಲಿ ಸಚಿವ ಡಿಕೆಶಿ ಹೆಸರು ಇದ್ದ ಹಿನ್ನೆಲೆಯಲ್ಲಿ ಶನಿವಾರ ಚಿಂಚೊಳ್ಳಿಗೆ ಆಗಮಿಸಿದ್ದ ಡಿಕೆಶಿ ಅವರನ್ನು ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಆಗ ಸಚಿವ ಡಿಕೆಶಿ ಪ್ರತಿಭಟನಾಕಾರರಿಗೆ ಧಮ್ಕಿ ಹಾಕಿದ ಘಟನೆ ನಡೆಯಿತು.

Advertisement

ಕಲಬುರಗಿ ಚಿಂಚೊಳ್ಳಿ ಪಟ್ಟಣದಲ್ಲಿ ಇಂಧನ ಸಚಿವ ಡಿಕೆಶಿಗೆ ಬಿಜೆಪಿ ಕಾರ್ಯಕರ್ತರು ಘೇರಾವ್ ಹಾಕಿದಾಗ, ಆಕ್ರೋಶಗೊಂಡ ಡಿಕೆಶಿ ಇದೆಲ್ಲಾ ನನ್ನ ಮುಂದೆ ನಡೆಯಲ್ಲ ಎಂದು ಅವಾಜ್ ಹಾಕಿದ್ದರು. ಇಡೀ ರಾಜ್ಯದಲ್ಲಿ ನಿಮ್ಮ ಇಡೀ ಲೀಡರ್ ನನ್ನ ಪ್ರಶ್ನಿಸಲು ಆಗಲ್ಲ, ಇದನ್ನೆಲ್ಲ ಬಿಟ್ಟುಬಿಡಿ ಎಂದು ಹೇಳಿದ್ದರು. ಈ ಸಂದರ್ಭದಲ್ಲಿ ಡಿಕೆಶಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.

ಸಚಿವ ಡಿಕೆಶಿ ವಿರುದ್ಧ ಬಿಜೆಪಿ ಕಾರ್ಯಕರ್ತರು ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು. ಚಿಂಚೊಳ್ಳಿಯಲ್ಲಿ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next