Advertisement

ಕನಕಪುರ ಬಂಡೆಗೇ “ಬಂಡೆಯ ಹಾರ’ಹಾಕಿದಾಗ…

11:25 PM Mar 28, 2023 | Team Udayavani |

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಅಭಿಮಾನಿಗಳು ಕನಕಪುರದ ಬಂಡೆ ಎಂದು ಪ್ರೀತಿಯಿಂದ ಕರೆಯುವ ವಾಡಿಕೆಯುಂಟು. ಡಿಕೆಶಿಯವರು ಎಂಥದ್ದೇ ಸಮಯದಲ್ಲೇ ಆಗಲಿ, ಬಂಡೆಯಂತೆ ಗಟ್ಟಿಯಾಗಿರ್ತಾರೆ ಎಂಬುದು ಈ ಮಾತಿನ ಮೂಲಾರ್ಥ.

Advertisement

ಡಿಕೆಶಿ ಕೂಡ ಅಭಿಮಾನಿಗಳ ಈ ಪ್ರೀತಿಯ ಬಿರುದನ್ನು ಒಪ್ಪಿಕೊಂಡಿದ್ದಾರೆ. ಡಿ.ಕೆ.ಶಿವಕುಮಾರ್‌ ಅವರು ಮಂಗಳವಾರ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಬಾಬುರಾಯನಕೊಪ್ಪಲು ಗ್ರಾಮದಲ್ಲಿ ಪ್ರಜಾಧ್ವನಿಯಾತ್ರೆ ನಡೆಸಿದ್ದು ಈ ವೇಳೆ ಯುವ ಕಾಂಗ್ರೆಸ್‌ ಕಾರ್ಯಕರ್ತರು ಡಿಕೆಶಿಗೆ “ಬಂಡೆಯ ಹಾರ’ವನ್ನೇ ಹಾಕಿದ್ದಾರೆ.

ಈ ಮೂಲಕ ಕನಕಪುರ ಬಂಡೆಯನ್ನು ಯಾರಿಂದರೂ ಹೊಡೆಯಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಥರ್ಮಕೋಲ್‌ನಿಂದ ಈ ಬಂಡೆ ಹಾರವನ್ನು ತಯಾರಿಸಲಾಗಿದೆ. ಮೈಸೂರಿನ ಕಲಾವಿದರು ಈ ಹಾರ ತಯಾರಿಸಿಕೊಟ್ಟಿದ್ದಾರೆ.

ಎಲ್ಲರೂ ಹಣ್ಣು, ಹೂವು, ತರಕಾರಿಯಲ್ಲಿ ಹಾರ ಮಾಡಿ ಹಾಕುತ್ತಾರೆ. ಆದರೆ ನಮ್ಮ ಡಿಕೆಶಿಗೆ ನಾವು ಬಂಡೆಯ ಹಾರವನ್ನೇ ಹಾಕಿದ್ದೇವೆ ಎಂದು ಕಾರ್ಯಕರ್ತರು ಖುಷಿಯಿಂದ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next