Advertisement

Karnataka Polls ಕಾಂಗ್ರೆಸ್ ಸೋಲಿಸಲು ಡಿಕೆ ಶಿವಕುಮಾರ್ ಒಬ್ಬರೇ ಸಾಕು: ಯತ್ನಾಳ ವಾಗ್ದಾಳಿ

02:57 PM Apr 23, 2023 | keerthan |

ವಿಜಯಪುರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ ಮಾತ್ರಕ್ಕೆ ಬಿಜೆಪಿ ಪಕ್ಷದ ಲಿಂಗಾಯತರ ಡ್ಯಾಂ ಒಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ಸೋಲಿಸಲು ಶಿವಕುಮಾರ್ ಒಬ್ಬರೇ ಸಾಕು. ಲಿಂಗಾಯತ ನಾಯಕರು ಭ್ರಷ್ಟರು ಎಂದಿರು ಸಿದ್ಧರಾಮಯ್ಯ ಇಡೀ ಲಿಂಗಾಯತ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ಕೂಡಲೇ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು.

Advertisement

ಭಾನುವಾರ ನಗರದಲ್ಲಿರುವ ತಮ್ಮ ಚುನಾವಣಾ ಪ್ರಚಾರ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಜಲಿಂಗಪ್ಪ, ಜೆ.ಎಚ್.ಪಟೇಲ, ವೀರೇಂದ್ರ ಪಾಟೀಲ ಅವರಂಥ ನಾಯಕರು ಭ್ರಷ್ಟಾಚಾರ ಮಾಡಿದ್ದಾರೆಯೇ ಎಂದು ಪ್ರಶ್ನಿಸಿ, ಸಿದ್ದರಾಮಯ್ಯ ಕ್ಷಮೆ ಯಾಚನೆಗೆ ಆಗ್ರಹಿಸಿದರು. ಅಲ್ಲದೇ ಕಾಂಗ್ರೆಸ್ ನಾಯಕರಿಗೆ ನಿಜಕ್ಕೂ ತಾಕತ್ತಿದ್ದರೆ ಲಿಂಗಾಯತ ನಾಯಕರಿಗೆ ಅದರಲ್ಲೂ ಜಗದೀಶ ಶಟ್ಟರ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಲಿ ಎಂದು ಸವಾಲು ಹಾಕಿದರು.

ಸ್ವಾತಂತ್ರ್ಯ ಸಂಗ್ರಾಮದ ಹಂತದಿಂದ ಹಿಂದೂ ವಿರೋಧಿ ಹಾಗೂ ಸಂವಿಧಾನದ ನಿರ್ಮಾತೃ ಬಿ.ಆರ್.ಅಂಬೇಡ್ಕರ್ ಅವರಿಗೆ ಅಂತ್ಯ ಸಂಸ್ಕಾರಕ್ಕೂ ಸ್ಥಳ ನೀಡದೇ ಕಾಂಗ್ರೆಸ್ ದಲಿತ ವಿರೋಧಿ ನೀತಿ, ಅವಮಾನದ ನಡೆ ಅನುಸರಿಸುತ್ತಾ ಬಂದಿದೆ. ಹೀಗಾಗಿ ಹಿಂದೂ ಹಾಗೂ ಲಿಂತಾಯತ ವಿರೋಧಿ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ಮತದಾರ ಅಧಿಕಾರ ನೀಡಲು ಸಾಧ್ಯವಿಲ್ಲ ಎಂದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ದಲಿತರ ಮೀಸಲಾತಿ ರದ್ದಾಗುತ್ತದೆ ಎಂದು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬರುತ್ತಲೇ ದಲಿತರಿಗೆ ಮೀಸಲಾತಿ ಹೆಚ್ಚಿಸಿದೆ. ಲಿಂಗಾಯತ, ಮರಾಠ, ಕ್ರಿಶ್ಚಿಯನ್, ಜೈನ್ ಸೇರಿದಂತೆ ಬಹುತೇಕ ಸಮುದಾಯಗಳಿಗೆ ನ್ಯಾಯ ಸಮ್ಮತ ಮೀಸಲಾತಿ ಘೋಷಿಸಿದೆ ಎಂದು ವಿವರಿಸಿದರು.

ಸಿದ್ದರಾಮಯ್ಯ ಅವರು ಎಂ.ಬಿ.ಪಾಟೀಲ ಮಾತು ಕೇಳಿದ್ದರಿಂದರೆ ಕಾಂಗ್ರೆಸ್ ಸರ್ಕಾರ ಕಳೆದುಕೊಳ್ಳುವ ದುಸ್ಥಿತಿ ಬಂತು. ಲಿಂಗಾಯತ ಧರ್ಮವನ್ನು ಒಡೆಯಲು ಮುಂದಾದ ಸಿದ್ದರಾಮಯ್ಯ ಇದೀಗ ಲಿಂಗಾಯತರು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಅಪಚಾರ ಮಾಡಿದ್ದಾರೆ. ಕೂಡಲೇ ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಮೇ 10 ರಂದು ರಾಜ್ಯದ ಜನರು ಮತದಾನದ ಮೂಲಕ ಕಾಂಗ್ರೆಸ್‍ಗೆ ಕೊನೆ ಮೊಳೆ ಹೊಡೆಯಲಿದ್ದಾರೆ ಎಂದು ಎಚ್ಚರಿಸಿರು.

Advertisement

ಬಿಜೆಪಿ ಪಕ್ಷ ಜಗದೀಶ ಶಟ್ಟರ, ಲಕ್ಷ್ಮಣ ಸವದಿ ಅವರಿಗೆ ಬಿಜೆಪಿ ಮಾಡಿದ ಅನ್ಯಾಯ ಏನು? ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ದಲಿತರಿಗೆ ಮೀಸಲಾತಿ ತೆಗೆಯುವುದಾಗಿ, ಗೋ ಹತ್ಯೆ ನಿಷೇಧ ಹಿಂಪಡೆಯುವುದಾಗಿ ಹೇಳುತ್ತಾರೆ. ಕಾಂಗ್ರೆಸ್ ಪಕ್ಷದ ಈ ನಿರ್ಧಾರಕ್ಕೆ ನಿಮ್ಮ ಸಹಕಾರ ಇದೆಯೇ ಎಂದು ಯತ್ನಾಳ ಪ್ರಶ್ನಿಸಿದರು.

ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯನ್ನು ನಾನು ಪ್ರಶ್ನಿಸಿದರೆ, ಯತ್ನಾಳ ಪಕ್ಷಬಿಟ್ಟು ಹೋಗಿರಲಿಲ್ಲವೇ ಎನ್ನುತ್ತಾರೆ. ಪಕ್ಷದ ಅಂದಿನ ನಾಯಕರು ನನ್ನನ್ನು ಉಚ್ಛಾಟಿಸಿದ್ದರಿಂದ ನಾನು ಜೆಡಿಎಸ್ ಪಕ್ಷ ಸೇರಿದ್ದೆ ಹೊರತು, ನಾನಾಗೇ ಪಕ್ಷ ಬಿಟ್ಟಿರಲಿಲ್ಲ. ಮತ್ತೊಮ್ಮೆ ಇಂಥದ್ಧೇ ಪರಿಸ್ಥಿತಿ ಎದುರಾದಾಗ ಪಕ್ಷೇತರನಾಗಿ ಸ್ಪರ್ಧಿಸಿದ್ದೆನೆಯೇ ಹೊರತು ಕಾಂಗ್ರೆಸ್ ಸೇರಿರಲಿಲ್ಲ ಎಂದು ಸಮಜಾಯಿಶಿ ನೀಡಿದರು.

ಕ್ಷೇತ್ರದ ಮತದಾರ ಸ್ಪರ್ಧಿಗಳ ಯೋಗ್ಯತೆ, ವ್ಯಕ್ತಿತ್ವ, ಅಭಿವೃದ್ಧಿ ನೋಡಿ ಮತದಾನ ಮಾಡುತ್ತಾರೆ. ಹೀಗಾಗಿ ಮುಸ್ಲೀಂ, ಹಿಂದುತ್ವದ ಪ್ರಶ್ನೆಗಿಂತ ಅಭಿವೃದ್ಧಿ ನೋಡಿ ಜನರು ಮತ ಹಾಕುತ್ತಾರೆ. ನಗರದಲ್ಲಿ ಕಾಂಗ್ರೆಸ್ ಸ್ಪರ್ಧಿ ಗೆದ್ದರೆ ವ್ಯಾಪಾರಿಗಳಿಗೆ ಹಸ್ತಾವಸೂಲಿ, ಗೂಂಡಾಗಿರಿ ಆರಂಭಗೊಳ್ಳುತ್ತವೆ. ಭೂಮಾಫಿಯಾ ಹೆಚ್ಚಲಿದೆ ಎಂಬ ಭಯದಲ್ಲಿದ್ದಾರೆ ಎಂದರು.

ಕಾರಣ ನಗರದ ಎಲ್ಲ ಸಮುದಾಯದ ಜನರು ನನ್ನ ಅವಧಿಯಲ್ಲಿ ಒಂದೇ ಒಂದು ಗಲಭೆ ನಡೆಯದೇ ಅಭಿವೃದ್ಧಿಗೆ ಆದ್ಯತೆ ನೀಡಿದ್ದರಿಂದ ನೆಮ್ಮದಿಯಾಗಿದ್ದಾರೆ. ಈ ಬಾರಿ 50 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲ್ಲಲಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next