Advertisement

ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ

01:45 PM Feb 05, 2018 | Team Udayavani |

ಸುರತ್ಕಲ್‌ : ಕಬಡ್ಡಿ ನಮ್ಮ ದೇಶೀ ಕ್ರೀಡೆಯಾಗಿದ್ದು, ಇದೀಗ ವಿಶ್ವದುದ್ದಕ್ಕೂ ಪ್ರಸಿದ್ಧಿ ಪಡೆದಿದೆ ಎಂದು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್‌ ಹೇಳಿದರು. ಬದ್ರಿಯಾ ಹೆಲ್ತ್‌ ಲೀಗ್‌ ಸುರತ್ಕಲ್‌ನ ಗುಡ್ಡೆಕೊಪ್ಲದಲ್ಲಿ ಆಯೋಜಿಸಿದ್ದ ಅಂತರ್‌ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ ಉದಾಟಿಸಿ ಅವರು ಮಾತನಾಡಿದರು. 

Advertisement

ಕಬಡ್ಡಿ ಕ್ರೀಡೆಯನ್ನು ಹಳ್ಳಿ ಹಳ್ಳಿಗಳಲ್ಲೂ ಯುವ ಸಮೂಹ ಆಡುತ್ತದೆ. ಇಂದು ಪ್ರೀಮಿಯರ್‌ ಲೀಗ್‌ ಮಟ್ಟಕ್ಕೆ ಬೆಳೆದು ನಿಂತಿದೆ. ನೂರಾರು ಯುವ ಕ್ರೀಡಾ ಪಟುಗಳಿಗೆ ಮನ್ನಣೆ ದೊರೆತಿದೆ. ಉದ್ಯೋಗಾವಕಾಶವೂ ಈ ಕ್ರೀಡೆಯ ಮೂಲಕ ಲಭಿಸುತ್ತಿದೆ ಎಂದರು.

ಶಾಸಕ ಮೊದಿನ್‌ ಬಾವಾ ಮಾತನಾಡಿ, ಬದ್ರಿಯ ಹೆಲ್ತ್‌ ಲೀಗ್‌ ಕುಸ್ತಿಯಲ್ಲೂ ಹೆಸರು ಗಳಿಸಿದ್ದು ಇದೀಗ ಪ್ರಥಮವಾಗಿ ಕಬಡ್ಡಿಯನ್ನು ಯಶಸ್ವಿಯಾಗಿ ಸಂಘಟಿಸಿದೆ ಎಂದರು. ಕಾರ್ಪೊರೇಟರ್‌ ಅಶೋಕ್‌ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ, ಐ. ಇಸ್ಮಾಯಿಲ್‌, ಕಬಡ್ಡಿ ಅಂತಾರಾಷ್ಟ್ರೀಯ ರೆಫ್ರಿ ಪುರುಷೋತ್ತಮ್‌, ಹಮೀದ್‌ ಕಟ್ಲ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next