Advertisement

ವಿಮಾನ ದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಅರ್ಪಣೆ

10:30 PM May 22, 2022 | Team Udayavani |

ಪಣಂಬೂರು: ಹನ್ನೆರಡು ವರ್ಷಗಳ ಹಿಂದೆ ನಡೆದ ವಿಮಾನ ದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮ ಕೂಳೂರು ಬಳಿ ಇರುವ ಸ್ಮಾರಕ ಉದ್ಯಾನವನದಲ್ಲಿ ದ.ಕ. ಜಿಲ್ಲಾಡಳಿತದಿಂದ ರವಿವಾರ ನಡೆಯಿತು.

Advertisement

ಸಂಸದ ನಳಿನ್‌ ಕುಮಾರ್‌ ಕಟೀಲು, ಮೇಯರ್‌ ಪ್ರೇಮಾನಂದ ಶೆಟ್ಟಿ, ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಎಸ್‌.ಪಿ. ಋಷಿಕೇಶ್‌ ಸೋನಾವಣೆ ಹೂಗುತ್ಛ ಅರ್ಪಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

ಅಧಿಕಾರಿಗಳಾದ ಗೋಕುಲ್‌ ದಾಸ್‌ ನಾಯಕ್‌, ಪುರಂದರ ಹೆಗ್ಡೆ, ಡಾ| ಮುರಳಿ ಮೋಹನ್‌ ಚೂಂತಾರು, ಡಾ| ಕಿಶೋರ್‌ ಕುಮಾರ್‌, ಪಾಲಿಕೆ ಎಇ ಖಾದರ್‌, ಕಂದಾಯಾಧಿಕಾರಿ ರವಿಪ್ರಸಾದ್‌ ಮಲ್ಯ, ಮನಪಾ ಸದಸ್ಯೆ ಸುನೀತಾ, ಎನ್‌ಎಂಪಿಎ ಕಾರ್ಯದರ್ಶಿ ಕೃಷ್ಣ ಕುಮಾರ್‌, ಮುಖ್ಯ ಎಂಜಿನಿಯರ್‌ ಹರಿನಾಥ್‌, ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ಬಜಪೆ ವಿಮಾನ ನಿಲ್ದಾಣದ ಸಮೀಪದ ಕೆಂಜಾರಿನಲ್ಲಿ 2010ರಲ್ಲಿ ನಡೆದ ವಿಮಾನ ದುರಂತದಲ್ಲಿ ಮಡಿದು ಗುರುತು ಪತ್ತೆಯಾದವರ ಶವಸಂಸ್ಕಾರವನ್ನು ಕೂಳೂರು ತಣ್ಣೀರುಬಾವಿ ರಸ್ತೆ ಬಳಿಯ ಪಲ್ಗುಣಿ ನದಿ ತಟದಲ್ಲಿ ಮಾಡಲಾಗಿದ್ದು, ಸ್ಮಾರಕವನ್ನು ಸ್ಥಾಪಿಸಿ ಪ್ರತೀ ವರ್ಷ ಮೃತರಿಗೆ ಗೌರವ ಸಲ್ಲಿಸಲಾಗುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next