Advertisement

15 ಟನ್‌ ತರಕಾರಿ ಬಡವರಿಗೆ ವಿತರಣೆ

05:31 PM Jun 04, 2021 | Team Udayavani |

ಕೋಲಾರ:ಮನ್ವಂತರ ಜನಸೇವಾ ಟ್ರಸ್ಟ್‌ಆಶ್ರಯದಲ್ಲಿ ಇಲ್ಲಿನ ಗಾಂಧಿನಗರ 2ಮತ್ತು 3ನೇ ವಾರ್ಡ್‌ನ ಸಾವಿರಾರುಕುಟುಂಬಗಳಿಗೆ ರೈತರಿಂದ ಖರೀದಿಸಿದ15 ಟನ್‌ ತರಕಾರಿಯನ್ನು ಟ್ರಸ್ಟ್‌ ಹಾಗೂಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿಗೋವಿಂದಗೌಡ ವಿತರಿಸಿದರು.

Advertisement

ಈ ವೇಳೆ ಮಾತನಾಡಿದ ಗೋವಿಂದಗೌಡ, ಕೋವಿಡ್‌ ಸಂದರ್ಭದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ತರಕಾರಿಬಡವರಿಗೆವಿತರಿಸುವುದು ಪುಣ್ಯದಕೆಲಸವಾಗಿದೆ. ನಾವು ಸರ್ಕಾರ ಏನೂಮಾಡಲಿಲ್ಲ ಎಂದು ದೂಷಣೆ ಮಾಡುವುದು ಬೇಡ. ನಮ್ಮ ಕೈಲಾದಷ್ಟು ಮಟ್ಟಿಗೆರೈತರು, ಬಡವರಿಗೆ ಸಹಾಯ ಮಾಡಬೇಕು ಎಂದು ಹೇಳಿದರು.

ಟ್ರಸ್ಟ್‌ನಸಂಸ್ಥಾಪಕ ಕಾರ್ಯದರ್ಶಿ ಪಾ.ಶ್ರೀ.ಅನಂತರಾಮ್‌, ಡಿಸಿಸಿ ಬ್ಯಾಂಕ್‌ ನಿರ್ದೇಶಕನಾಗನಾಳ ಸೋಮಣ್ಣ, ನಗರಸಭೆಉಪಾಧ್ಯಕ್ಷ ಪ್ರವೀಣ್‌ಗೌಡ ಉಪಸ್ಥಿತರಿದ್ದು, ಅಣ್ಣಿಹಳ್ಳಿ ಎಸ್‌ಎಫ್‌ಸಿಎಸ್‌ ಅಧ್ಯಕ್ಷನಾಗರಾಜ್‌, ಮನ್ವಂತರ ಟ್ರಸ್ಟಿ ಸತ್ಯನಾರಾಯಣರಾವ್‌, ಮುಖಂಡರಾದ ತುರಾಂಡಹಳ್ಳಿ ಸರ್ವೇಶ್‌, ಆಟೋ ನಾರಾಯಣಸ್ವಾಮಿ, ವೆಂಕಟೇಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next