Advertisement

ದೌರ್ಜನ್ಯ ಪ್ರಕರಣ: ಮೃತ ವ್ಯಕ್ತಿ ಕುಟುಂಬಕ್ಕೆ ಪರಿಹಾರ ವಿತರಣೆ

05:06 PM Jun 17, 2021 | Team Udayavani |

ಬಾಗಲಕೋಟೆ: ಬಾದಾಮಿ ತಾಲೂಕಿನ ನರೇನೂರ ಗ್ರಾಮದಲ್ಲಿ ಇತ್ತೀಚೆಗೆ ನಡೆದ ದೌರ್ಜನ್ಯ ಪ್ರಕರಣದಲ್ಲಿ ಮೃತಪಟ್ಟ ಅವರ ಕುಟುಂಬಕ್ಕೆ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಲಕ್ಷ್ಮಣ ವಡ್ಡರ ಮಹೇಶ್‌ ಪೋತದಾರ ಗ್ರಾಮಕ್ಕೆ ಭೇಟಿ ನೀಡಿ ಮೊದಲ ಕಂತಿನ 4,12,500 ರೂ.ಗಳ ಪರಿಹಾರ ಧನ ವಿತರಿಸಿದರು.

Advertisement

ಮೃತಪಟ್ಟ ಲಕ್ಷ್ಮಣ ವಡ್ಡರ ಅವರ ಪತ್ನಿ ರೇಣವ್ವ ವಡ್ಡರ ಅವರಿಗೆ ನೀಡಿ ಸಾಂತ್ವನ ಹೇಳಿದ ಅವರು, ಸರ್ಕಾರದಿಂದ ಸಿಗುವ ಎಲ್ಲ ಸವಲತ್ತುಗಳನ್ನು ನಿಯಮ ಅನುಸಾರವಾಗಿ ನೀಡಲಾಗುವುದು.

ಗ್ರಾಮದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಇದ್ದು, ಶಾಂತಿಯುತ ವಾತಾವರಣ ಇರುವುದಾಗಿ ತಿಳಿಸಿದರು. ಬಾದಾಮಿ ತಾಲೂಕಿನ ಸಹಾಯಕ ನಿರ್ದೇಶಕಿ ಭವಾನಿ ಪಾಟೀಲ್‌, ಕಚೇರಿ ಸಿಬ್ಬಂದಿ ಹಿರೇಮಠ, ಪೊಲೀಸ್‌ ಇಲಾಖೆ ಸಿಬ್ಬಂದಿ ರಮೇಶ್‌ ದೊಡಮನಿ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next