Advertisement

ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ

11:55 AM Jan 29, 2019 | Team Udayavani |

ಸೈದಾಪುರ: 70ನೇ ಗಣರಾಜ್ಯೋತ್ಸವ ಮತ್ತು ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಸ್ವಾಮಿ ವಿವೇಕಾನಂದ ತರುಣ ಸಂಘದ ವತಿಯಿಂದ ಏರ್ಪಡಿಸಿದ್ದ ವಲಯ ಮಟ್ಟದ ಸಾಮಾನ್ಯ ಸ್ಪರ್ಧಾ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು.

Advertisement

ಸಂಘದ ಅಧ್ಯಕ್ಷ ಬಿ.ಬಿ. ವಡವಟ್, ಕಾರ್ಯದರ್ಶಿ ಭೀಮಣ್ಣ ಮಡಿವಾಳಕರ್‌, ಉಪಾಧ್ಯಕ್ಷ ರಾಘವೇಂದ್ರ ಕಲಾಲ್‌, ಸಿದ್ದಪ್ಪ ಪೂಜಾರಿ, ತಾಯಪ್ಪ ಭೋಮ್ಮಣೋರ್‌, ಕುಮಾರ ಚವ್ಹಾಣ್‌, ಬನಶಂಕರ ಕಣೇಕಲ್‌, ರವಿಕುಮಾರ ಕಾವೆಟಿ, ರಾಜೇಶ ದೇವರಶೆಟ್ಟಿ, ಅರುಣ್‌ಕುಮಾರ್‌ ಜೇಗರ್‌, ರೆಡ್ಡಿ ಮಡಿವಾಳ್‌, ಸಂತೋಷ ದೇಸಾಯಿ, ದೇವು ವಡವಟ್, ಸಾಬರೆಡ್ಡಿ ಕೂಡಲೂರ, ಬಲರಾಮ್‌ ಚವ್ಹಾಣ್‌, ಶ್ರೀಕಾಂತ್‌ ನಾಟೇಕರ್‌ ಇತರರಿದ್ದರು.

ಹಿರಿಯ ಪ್ರಾಥಮಿಕ ವಿಭಾಗ: 5ನೇ ತರಗತಿ- ಅನಂತಮ್ಮ ಬಸವರಾಜ ಗುರುಕುಲ ವಿದ್ಯಾಪೀಠ ಸೈದಾಪುರ ಪ್ರಥಮ, ಕಾವೇರಿ ಸರಕಾರಿ ಹಿ.ಮಾ.ಪ್ರಾ. ಶಾಲೆ ಸೈದಾಪುರ ದ್ವಿತೀಯ, 6ನೇ ತರಗತಿ- ಅಶೋಕ ಬಸವಲಿಂಗಪ್ಪ ನೇತಾಜಿ ಹಿ.ಪ್ರಾ.ಶಾಲೆ ಸೈದಾಪುರ ಪ್ರಥಮ, ಸಾಬರೆಡ್ಡಿ ಶಾಂತಪ್ಪ ವಾಸವಿ ವಿದ್ಯಾ ಸಂಸ್ಥೆ ದ್ವಿತೀಯ, 7ನೇ ತರಗತಿ- ಮೇಘಾ ರಾಯಪ್ಪ ವಾಸವಿ ವಿದ್ಯಾ ಸಂಸ್ಥೆ ಪ್ರಥಮ, ಅರವಿಂದ ಶಂಕ್ರಪ್ಪ ನೇತಾಜಿ ಹಿ.ಪ್ರಾ.ಶಾಲೆ ದ್ವಿತೀಯ.

ಪ್ರೌಢಶಾಲಾ ವಿಭಾಗ: 8ನೇ ತರಗತಿ-ಭಾವನಿ ಶಿವಾನಂದಸ್ವಾಮಿ ವಿದ್ಯಾ ವರ್ಧಕ ಪ್ರೌಢ ಶಾಲೆ ಸೈದಾಪುರ ಪ್ರಥಮ, ಅರುಣ್‌ ದಾನಪ್ಪ ಸರಕಾರಿ ಹಿ.ಮಾ.ಪ್ರಾ. ಶಾಲೆ ಕಣೇಕಲ್‌ ದ್ವಿತೀಯ, 9ನೇ ತರಗತಿ- ರಾಜೇಶ ರವಿಕುಮಾರ ಸ.ಪ್ರೌ.ಶಾಲೆ ಯಲಸತ್ತಿ ಪ್ರಥಮ, ಪೂಜಾ ನರಪತ್‌ಸಿಂಗ್‌ ವಿದ್ಯಾ ವರ್ಧಕ ಪ್ರೌಢ ಶಾಲೆ ಸೈದಾಪುರ ದ್ವಿತೀಯ, 10ನೇ ತರಗತಿ-ದರ್ಶನ ವಿದ್ಯಾ ವರ್ಧಕ ಪ್ರೌಢ ಶಾಲೆ ಸೈದಾಪುರ ಪ್ರಥಮ, ತರುಣ್‌ ಕುಮಾರ ವಿದ್ಯಾ ವರ್ಧಕ ಪ್ರೌಢಶಾಲೆ ಸೈದಾಪುರ ದ್ವಿತೀಯ ಸ್ಥಾನ ಗಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next