Advertisement

ಅಲೆಮಾರಿಗಳಿಗೆ ದಿನಸಿ ವಿತರಣೆ

06:28 PM Apr 29, 2020 | Suhan S |

ಬ್ಯಾಡಗಿ: ದೇಶ ಎದುರಿಸುತ್ತಿರುವ ಪ್ರಸ್ತುತ ಸಂದಿಗ್ಧ ಸ್ಥಿತಿಯಿಂದ ಹೊರಬರಬೇಕಾದಲ್ಲಿ ಪ್ರತಿಯೊಬ್ಬ ಪ್ರಜೆಯೂ ತಮ್ಮ ಜವಾಬ್ದಾರಿ ನಿಭಾಯಿಸಬೇಕಾಗಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು. ತಾಲೂಕಿನ ಚಿಕ್ಕಣಜಿ ಕ್ರಾಸ್‌ನಲ್ಲಿ ನೆಲಸಿರುವ ಅಲೆಮಾರಿ ಜನಾಂಗಗಳಿಗೆ ದಿನಸಿ ಸಾಮಾನು ಹಾಗೂ ಮಾಸ್ಕ್ ವಿತರಿಸಿ ಅವರು ಮಾತನಾಡಿದರು.

Advertisement

ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಅಧಿಕಾರಿಗಳ ಶ್ರಮ ವ್ಯರ್ಥವಾಗದಂತೆ ಮತ್ತು ಜನ ಸಮುದಾಯಗಳಿಗೆ ಹರಡದಂತೆ ಪ್ರತಿಯೊಬ್ಬರು ತಮ್ಮ ಹಾಗೂ ಕುಟುಂಬದ ಆರೋಗ್ಯವನ್ನು ಸಾಮಾಜಿಕ ಅಂತರದೊಂದಿಗೆ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು. ಮುಖಂಡರಾದ ಮೂಕಪ್ಪ ಬುಡಪನಹಳ್ಳಿ, ಶಿವರಾಜ ಹರಮಗಟ್ಟಿ, ಸಂಜೀವ ಮಡಿವಾಳರ, ಗಣೇಶ ವೆರ್ಣೇಕರ್‌, ಎಸ್‌.ಎಸ್‌.ಶೆಟ್ಟರ, ಪ್ರದೀಪ ಸದ್ದಲಗಿ, ಹೊನಕೇರಪ್ಪ ಬನ್ನಿಹಟ್ಟಿ, ಸಂತೋಷ ಹೊಸಂಗಡಿ, ಮಂಜು ಪೂಜಾರ, ಎನ್‌.ಎಚ್‌. ಕೊಟ್ರಯ್ಯ, ಶಂಭು ವಾರದ, ವಿನಯ ಆರಾಧ್ಯಮಠ ಇನ್ನಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next