Advertisement

ಐದು ಸಾವಿರ ಆಹಾರ ಕಿಟ್‌ ವಿತರಣೆ

03:16 PM May 02, 2021 | Team Udayavani |

ಬೆಂಗಳೂರು: ಯಶವಂತಪುರ ವಿಧಾನಸಭೆ ಕ್ಷೇತ್ರದಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿ ಹೋಂಕ್ವಾರಂಟೈನ್‌ನಲ್ಲಿರುವ ಕುಟುಂಬಗಳಿಗೆ ಉಚಿತವಾಗಿ 5000 ರೇಷನ್‌ ಕಿಟ್‌ಗಳನ್ನುಕ್ಷೇತ್ರವನ್ನು ಪ್ರತಿನಿಧಿಸುವ ಸಹಕಾರ ಸಚಿವರೂ ಆದ ಎಸ್‌.ಟಿ. ಸೋಮಶೇಖರ್‌ವೈಯಕ್ತಿಕ ವೆಚ್ಚದಲ್ಲಿ ವಿತರಿಸುತ್ತಿದ್ದಾರೆ.

Advertisement

ಜತೆಗೆ, ಔಷಧ ಖರೀದಿಸಲು ಸಾಮರ್ಥ್ಯ ಇಲ್ಲದ ಕುಟುಂಬಗಳ ಮನವಿ ಮೇರೆಗೆಔಷಧ ಸಹ ಒದಗಿಸುತ್ತಿದ್ದಾರೆ. ಇದಕ್ಕಾಗಿಯೇ ಸ್ವಯಂ ಸೇವಕರ ತಂಡ ವನ್ನುಸಜ್ಜುಗೊಳಿಸಿರುವ ಅವರು, ಮಾಹಿತಿ ಸಂಗ್ರಹಿಸಿ ಸಂಕಷ್ಟದಲ್ಲಿ ರುವವರ ನೆರವಿಗೆಧಾವಿಸುತ್ತಿದ್ದಾರೆ.

ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವಿಪತ್ತು ನಾವೆಲ್ಲರೂ ಎದುರಿಸಬೇಕಾಗಿದೆ. ಈ ನಿಟ್ಟಿನಲ್ಲಿ ನನ್ನ ಕ್ಷೇತ್ರದಲ್ಲಿ ಕೊರೊನಾ ಪಾಸಿಟಿವ್‌ ಆಗಿ ಹೋಂಕ್ವಾರಂಟೈನ್‌ನಲ್ಲಿರುವವರಿಗೆ ಆಹಾರ ಕಿಟ್‌, ಮೆಡಿಕಲ್‌ ಕಿಟ್‌ ವಿತರಿಸಲಾಗುತ್ತಿದೆಎಂದು ಎಸ್‌.ಟಿ.ಸೋಮಶೇಖರ್‌ ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next