Advertisement

ಅರ್ಹರಿಗೆ ಮೀನುಗಾರಿಕೆ ಸಲಕರಣೆ ಕಿಟ್‌ ವಿತರಣೆ

01:03 PM Jun 04, 2022 | Team Udayavani |

ಲಿಂಗಸುಗೂರು: ಗುರುಗುಂಟ ಕ್ಲಸ್ಟರ್‌ನ ಗುಂತಗೋಳ ಗ್ರಾಪಂ ವ್ಯಾಪ್ತಿಯಲ್ಲಿ ರೂರ್ಬನ್‌ ಅಡಿಯಲ್ಲಿ ಮೀನುಗಾರಿಕೆ ಸಲಕರಣೆ ಕಿಟ್‌ಗಳನ್ನು ಸಂಸದ ರಾಜಾ ಅಮರೇಶ್ವರ ನಾಯಕ ಅವರು ಫಲಾನುಭವಿಗಳಿಗೆ ವಿತರಿಸಿದರು.

Advertisement

ಶ್ಯಾಮ್‌ ಪ್ರಸಾದ್‌ ಮುಖರ್ಜಿ ರೂರ್ಬನ್‌ ಯೋಜನೆಯ 2ನೇ ಹಂತದಲ್ಲಿ ಆಯ್ಕೆಯಾದ ಗುಂತಗೋಳ ಗ್ರಾಪಂ ವ್ಯಾಪ್ತಿಯ ಗೋನವಾಟ್ಲ, ಗೋನವಾಟ್ಲ ತಾಂಡ, ಜಲದುರ್ಗ, ಯರಗೋಡಿ, ಯಳಗುಂದಿ ಹಾಗೂ ಕಡದರಗಡ್ಡಿ ಗ್ರಾಮಗಳ 45 ಫಲಾನುಭವಿಗಳಿಗೆ ತಲಾ 10 ಸಾವಿರ ರೂ.ಗಳ ಮೌಲ್ಯದ ಮೀನುಗಾರಿಕೆ ಸಲಕರಣೆ ಕಿಟ್‌ ವಿತರಣೆ ಮಾಡಲಾಯಿತು.

ಈ ವೇಳೆ ಹಟ್ಟಿಚಿನ್ನದಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್‌, ಪುರಸಭೆ ಅಧ್ಯಕ್ಷೆ ಸುನೀತಾ ಕೆಂಭಾವಿ, ಮೀನುಗಾರಿಕೆ ಇಲಾಖೆಯ ಮಾಳಪ್ಪ ಹಾಗೂ ಇನ್ನಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next