Advertisement

ಸೋಂಕಿತರಿಗೆ ಡ್ರೈಫ್ರೂಟ್ಸ್‌ ವಿತರಣೆ

06:16 PM May 09, 2021 | Team Udayavani |

ಚಿಕ್ಕಬಳ್ಳಾಪುರ: ಕೊರೊನಾ ಸೋಂಕಿತರಿಗೆ ಪೌಷ್ಟಿಕಆಹಾರ ಒದಗಿಸುವ ಉದ್ದೇಶದಿಂದ ನಿತ್ಯ ಹಣ್ಣುಹಂಪಲು, ಡ್ರೈಫ್ರೂಟ್ಸ್‌ ವಿತರಿಸುವ ಕಾರ್ಯ ಸತ್ಯಸಾಯಿಅನ್ನಪೂರ್ಣ ಟ್ರಸ್ಟ್‌ನಿಂದ ನಡೆಯುತ್ತಿದೆ.ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ 600 ಮಂದಿ ಕೊರೊನಾ ಸೋಂಕಿತರಿಗೆ ಹಣ್ಣು ಹಂಪಲು ಜೊತೆಗೆಒಂದು ವಾರವರೆಗೆ ಡ್ರೈಫ್ರೂಟ್ಸ್‌ ವಿತರಿಸುವ ಕಾರ್ಯಆರಂಭಿಸಲಾಗಿದೆ.

Advertisement

ಜಿಲ್ಲೆಯ ಮುದ್ದೇನಹಳ್ಳಿಯಸತ್ಯಸಾಯಿ ಗ್ರಾಮದ ಪ್ರೇಮದೀಪ ಮಂದಿರದಲ್ಲಿಸದ್ಗುರು ಮಧುಸೂದನ್‌ ಸಾಯಿ ಈ ಮಹತ್ತರಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದಕುಲಾಧಿಪತಿ ಬಿ.ಎನ್‌.ನರಸಿಂಹಮೂರ್ತಿ, ಎಸ್ಪಿ ಮಿಥುನ್‌ಕುಮಾರ್‌, ಸಿಪಿಐ ಪ್ರಶಾಂತ್‌, ತಾಲೂಕುಆರೋಗ್ಯಾಧಿಕಾರಿ ಡಾ.ಎಂ.ಮುನಿಯಪ್ಪ, ಸತ್ಯಸಾಯಿಸಂಸ್ಥೆಗಳ ಪ್ರಧಾನ ಸಮನ್ವಯಾಧಿಕಾರಿ ಗೋವಿಂದರೆಡ್ಡಿಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next