Advertisement

ಪೊಲೀಸರ ಕರ್ತವ್ಯಕ್ಕೆ ಅಡ್ಡಿ : ಆರು ತಿಂಗಳ ಶಿಕ್ಷೆ

10:27 PM Dec 26, 2019 | mahesh |

ಮಂಗಳೂರು: ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಟೆಂಪೋವನ್ನು ಪೊಲೀಸರು ವಶಪಡಿಸಿಕೊಂಡು ಠಾಣೆಗೆ ಕೊಂಡೊಯ್ಯುತ್ತಿದ್ದಾಗ 34 ಮಂದಿಯ ತಂಡವೊಂದು ಅಡ್ಡಗಟ್ಟಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ 21 ಮಂದಿಗೆ ನ್ಯಾಯಾಲಯವು 6 ತಿಂಗಳು ಜೈಲು ಶಿಕ್ಷೆ ಹಾಗೂ 8,500 ರೂ. ದಂಡ ವಿಧಿಸಿದೆ.

Advertisement

ಉಳಾಯಿಬೆಟ್ಟು ಹಾಗೂ ಕಾಂತರಬೆಟ್ಟು ಪರಿಸರದ ನಿವಾಸಿಗಳಾದ ಖಾದ್ರಿ ಯಾನೆ ಅಬ್ದುಲ್‌ ಖಾದರ್‌ (53), ಪುತ್ತು ಯಾನೆ ಅಜ್ಮಲ್‌ (32), ಅಜರ್‌ (32), ಅಜರುದ್ದೀನ್‌ (31), ಅಬು ಕೆತ್ತಿಕಲ್‌ (31), ತಂಝಿಲ್‌ (27), ನಾಸಿರ್‌ ಯಾನೆ ಅಬ್ದುಲ್‌ ನಾಸಿರ್‌ (32), ಫೈಝಲ್‌ (29), ಹನೀಫ್ (37), ಅಲ್ತಾಫ್ (33), ಮುಸ್ತಫಾ (32), ಆಸಿಫ್ (30), ಅಝೀಜ್‌ (35), ಇಕ್ಬಾಲ್‌ (33), ಲತೀಫ್ (33), ಮುಸ್ತಫಾ (32), ನವಾಝ್ (37), ನವಾಝ್ (38), ಮಂಜೂರ್‌ (38), ನೌಶೀರ್‌ ಯಾನೆ ನಾಸಿರ್‌ ( 33), ರಶೀದ್‌ (38) ಶಿಕ್ಷೆಗೊಳಗಾದ ಅಪರಾಧಿಗಳು.

ಉಳಾಯಿಬೆಟ್ಟು ಗ್ರಾಮದ ಕಾಂತರಬೆಟ್ಟಿನಲ್ಲಿ 2012ರ ನ. 26ರಂದು ಸಂಜೆ ಅಂದಿನ ಇನ್‌ಸ್ಪೆಕ್ಟರ್‌ ಸುಧಾಕರ್‌ ಅವರು ಸಿಬಂದಿ ಜತೆಗೆ ಅಕ್ರಮ ಜಾನುವಾರು ಸಾಗಾಟದ ಟೆಂಪೋವನ್ನು ಪತ್ತೆ ಹಚ್ಚಿ ಠಾಣೆಗೆ ಕೊಂಡೊಯ್ಯುತ್ತಿದ್ದರು. ಆಗ ಟೆಂಪೋವನ್ನು ಪೊಲೀಸರ ಕೈಯಿಂದ ಬಿಡಿಸಿಕೊಂಡು ಹೋಗುವ ಉದ್ದೇಶದಿಂದ ಪೊಲೀಸ್‌ ವಾಹನ ಹಾಗೂ ಟೆಂಪೋವನ್ನು ತಡೆದು ನಿಲ್ಲಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಉಂಟು ಮಾಡಲಾ ಗಿತ್ತು. ಈ ಸಂಬಂಧ 34 ಆರೋಪಿಗಳನ್ನು ಬಂಧಿಸಲಾಗಿತ್ತು. ಆ ಬಳಿಕ ಜಾಮೀನು ಪಡೆದು ಕೆಲವರು ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡಿದ್ದಾರೆ.

ಮೂರನೇ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಅಶ್ವಿ‌ನಿ ಕೋರೆ ಅವರು 11 ಸಾಕ್ಷಿದಾರರ ಪೈಕಿ 9 ಮಂದಿಯನ್ನು ವಿಚಾರಣೆಗೊಳಪಡಿಸಿದ್ದರು. ಗ್ರಾಮಾಂತರ ಠಾಣೆಯ ಅಂದಿನ ಇನ್‌ಸ್ಪೆಕ್ಟರ್‌ ರವೀಶ್‌ ನಾಯಕ್‌ ಪ್ರಕರಣದ ತನಿಖೆ ನಡೆಸಿ, ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಬಿ. ಮೋಹನ ಕುಮಾರ್‌ ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next