Advertisement

ಶಾಸಕರಿಗೆ ಅನರ್ಹತೆ “ಗುಮ್ಮ’

05:28 AM Jul 13, 2019 | Lakshmi GovindaRaj |

ಬೆಂಗಳೂರು: ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಶಾಸಕರು ವಿಪ್‌ ಉಲ್ಲಂ ಸಿದರೆ ತತ್‌ಕ್ಷಣ ಅನರ್ಹಗೊಳ್ಳುತ್ತಾರೆ. ಆಗ ಉಪ ಚುನಾವಣೆಗೆ ಸ್ಪರ್ಧೆ ಮಾಡಲಾಗಲ್ಲ, ಸಚಿವರಾಗಲೂ ಸಾಧ್ಯವಿಲ್ಲ. ಮುಂದಿನ ಆರು ವರ್ಷ ಚುನಾವಣೆಗೆ ಸ್ಪರ್ಧೆ ಮಾಡುವಂತಿಲ್ಲ ಎಂಬ ಆತಂಕದ “ಅಸ್ತ್ರ’ ಸರ್ಕಾರವನ್ನು ಕಾಪಾಡಲಿದೆ ಎಂಬುದು ಕಾಂಗ್ರೆಸ್‌ ನಾಯಕರ ಅಭಿಪ್ರಾಯ.

Advertisement

ಶುಕ್ರವಾರ ವಿಧಾನಸಭೆ ಅಧಿವೇಶನ ಸಂದರ್ಭದಲ್ಲಿ ಮೊಗಸಾಲೆಯಲ್ಲಿ ಸಚಿವ ಸತೀಶ್‌ ಜಾರಕಿಹೊಳಿ, ಶಾಸಕಿ ಅಂಜಲಿ ನಿಂಬಾಳ್ಕರ್‌ ಸೇರಿ ಹಲವರು ಚರ್ಚಿಸುತ್ತಿದ್ದರು. ಈ ಸಂದರ್ಭದಲ್ಲಿ ವಿಪ್‌ ಉಲ್ಲಂ ಸಿ ಅನರ್ಹಗೊಳ್ಳಲು ಯಾವುದೇ ಶಾಸಕರು ಸಿದ್ಧರಿಲ್ಲ. ವಿಪ್‌ ಕೊಟ್ಟರೆ ಕಳೆದ ಬಾರಿ ಬಂದಂತೆ ಬಂದೇ ಬರ್ತಾರೆ ಎಂದು ವಾದ ಮಂಡಿಸುತ್ತಿದ್ದರು.

ಬಿಜೆಪಿಯ ಸಂಪರ್ಕದಲ್ಲಿದ್ದಾರೆಂಬ ಅನುಮಾನ ಇರುವ ಶಾಸಕರಿಗೆ ಇದೇ ವಿಚಾರ ತಿಳಿಸಿ ಅನರ್ಹತೆಯ ಆತಂಕ ಉಂಟು ಮಾಡುವಲ್ಲಿ ಕೆಲವು ನಾಯಕರು ನಿರತರಾಗಿದ್ದರು. ಈ ಮಧ್ಯೆ, ಮುಂಬೈಗೆ ತೆರಳಿರುವ ಶಾಸಕರ ಕುಟುಂಬದವರಿಗೂ ಇದೇ ವಿಚಾರ ಹೇಳಿ ಮನವೊಲಿಸಿ ವಾಪಸ್‌ ಕರೆಸುವ ಒತ್ತಡ ಹಾಕಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next