Advertisement

ಅಕ್ರಮ ಸಂಪತ್ತು : ಮುಲಾಯಂ, ಅಖೀಲೇಶ್‌ ಯಾದವ್‌ಗೆ ಸಿಬಿಐ ಕ್ಲೀನ್‌ ಚಿಟ್‌

09:23 AM May 22, 2019 | Sathish malya |

ಹೊಸದಿಲ್ಲಿ : ಸಮಾಜವಾದಿ ಪಕ್ಷದ ಹಿರಿಯ ನಾಯಕ ಮುಲಾಯಂ ಸಿಂಗ್‌ ಯಾದವ್‌ ಮತ್ತು ಪಕ್ಷದ ಮುಖ್ಯಸ್ಥ ಅಖೀಲೇಶ್‌ ಯಾದವ್‌ ಅವರಿಗೆ ಆದಾಯಕ್ಕೆ ಮೀರಿದ ಆಸ್ತಿ ಕೇಸಿನಲ್ಲಿ CBI ಕ್ಲೀನ್‌ ಚಿಟ್‌ ನೀಡಿದೆ.

Advertisement

ಸಿಬಿಐ ಈ ಸಂಬಂಧ ಸುಪ್ರೀಂ ಕೋರ್ಟಿಗೆ ಅಫಿದಾವಿತ್‌ ಸಲ್ಲಿಸಿದೆ. ಆ ಅಫಿದಾವಿತ್‌ ನಲ್ಲಿ ಸಿಬಿಐ, ಮುಲಾಯಂ ಮತ್ತು ಅಖೀಲೇಶ್‌ ಯಾದವ್‌ ಅವರ ವಿರುದ್ಧ ಅಕ್ರಮ ಆಸ್ತಿ ಕಲೆಹಾಕಿರುವ ಆರೋಪಕ್ಕೆ ಸಂಬಂಧಿಸಿ ರೆಗ್ಯುಲರ್‌ ಕೇಸ್‌ ದಾಖಲಿಸಲು ಯಾವುದೇ ಸಾಕ್ಷ್ಯಾಧಾರ ಪತ್ತೆಯಾಗಿಲ್ಲ ಎಂದು ಹೇಳಿದೆ.

ರಾಜಕೀಯ ಕಾರ್ಯಕರ್ತ ವಿಶ್ವನಾಥ್‌ ಚತುರ್ವೇದಿ ಎಂಬವರು 2005ರಲ್ಲಿ ಮುಲಾಯಂ ಮತ್ತು ಅಖೀಲೇಶ್‌ ವಿರುದ್ಧ ಅಕ್ರಮ ಆಸ್ತಿ ಕೇಸು ಹಾಕಿ ತನಿಖೆ ನಡೆಸುವಂತೆ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್‌) ದಾವೆಯನ್ನು ಸುಪ್ರೀಂ ಕೋರ್ಟಿನಲ್ಲಿ ದಾಖಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next