Advertisement

ರಾಜ್ಯದಲ್ಲೂ ಬುಲ್ಡೋಜರ್ ಪ್ರಯೋಗಕ್ಕೆ ಸಿಎಂ ಜೊತೆ ಚರ್ಚೆ: ಸಚಿವ ಅಶೋಕ್

02:25 PM Apr 23, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಬುಲ್ಡೋಜರ್ ಪ್ರಯೋಗಕ್ಕೆ ಸಂಬಂಧಪಟ್ಟಂತೆ ಸಿಎಂ‌ ಬಸವರಾಜ್ ಬೊಮ್ಮಾಯಿ ಜತೆ ಚರ್ಚೆ ಮಾಡುತ್ತೇನೆ ಎಂದು‌‌‌ ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಕೆಜಿ ಹಳ್ಳಿ‌, ಡಿಜೆ ಹಳ್ಳಿ ಘಟನೆ ಸೃಷ್ಟಿಕರ್ತರು ಕಾಂಗ್ರೆಸ್‌ನವರು. ಹೊಡೆದವರು, ಏಟು ತಿಂದವರು ಕಾಂಗ್ರೆಸ್‌ ನವರು. ಈಗ ಹುಬ್ಬಳ್ಳಿ ಘಟನೆಯಾಗಿದೆ. ಮೊದಲು ಅಮಾಯಕರ ಬಂಧನ ಆಗುತ್ತಿದೆಯೆಂದು ರೋಷಾವೇಶ ತೋರಿದ್ದರು. ಈಗ ಕಾಂಗ್ರೆಸ್ ನವರ ಬಂಧನ ಆಗುತ್ತಿದ್ದು  ರೋಷಾವೇಷ ಇಳಿದಿದೆ. ಪಿಎಸ್ಐ ನೇಮಕಾತಿಯಲ್ಲೂ ಕಾಂಗ್ರೆಸ್ ಮುಖಂಡರ ಬಂಧನವಾಗಿದೆ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ:ಪ್ರಿಯಾಂಕ್ ಖರ್ಗೆ ಆಡಿಯೋದಲ್ಲಿ ಬಾಂಬ್ ಇಲ್ಲ, ಏನೂ ಇಲ್ಲ: ಸಿಎಂ

ಹುಬ್ಬಳ್ಳಿ ದಾಂಧಲೆ‌ಕೋರರ ಜತೆ ವಿದೇಶಿಗರ ಜತೆ ನಂಟಿರಬಹುದು. ಹಿಜಾಬ್ ವಿಚಾರವೂ ಮೊದಲು ವಿದೇಶಿ ಚಾನಲ್ ಗಳಲ್ಲಿ ಪ್ರಸಾರ ಆಯಿತು. ಉತ್ತರ ಪ್ರದೇಶದ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಬುಲ್ಡೋಜರ್ ಪ್ರಯೋಗ ಜಾರಿಗೆ ಬರಬೇಕು. ಐಎಸ್ಐ ಸಂಪರ್ಕ, ಪಾಕ್ ಪರ ಜೈ ಅನ್ನುವವರು ಇದ್ದಾರೆ. ತುಂಬಾ ಜನ‌ ಒಳ್ಳೆಯವರಿದ್ದಾರೆ. ದಂಗೆಕೋರರಿಗೆ‌ ಮನೆನೂ‌ ಸಿಗಬಾರದು, ಆ ತರಹ ಮಾಡಬೇಕು. ಬುಲ್ಡೋಜರ್ ಪ್ರಯೋಗದ ಬಗ್ಗೆ ಸಿಎಂ ಜತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next