Advertisement

ಭಕ್ತರ ಜೈಕಾರ ನಡುವೆ ವಿನಾಯಕನ ವಿಸರ್ಜನೆ

12:13 PM Sep 03, 2017 | |

ರಾಮನಗರ: ತಾಲೂಕಿನ ಚನ್ನಮಾನಹಳ್ಳಿ ಗ್ರಾಮದಲ್ಲಿ ಸ್ಥಾಪಿಸಿದ್ದ ಶ್ರೀ ವಿದ್ಯಾಗಣಪತಿ ಮೂರ್ತಿಯನ್ನು ಗ್ರಾಮಸ್ಥರು ಭಕ್ತಿ, ಶ್ರದ್ಧೆಯಿಂದ ಶುಕ್ರವಾರ ವಿಸರ್ಜಿಸಿದರು. 

Advertisement

ಗ್ರಾಮದ ಶ್ರೀ ವಿದ್ಯಾಗಣಪತಿ ಸೇವಾ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಭಕ್ತರ ನೆರವಿನಲ್ಲಿ ಸತತ 34 ವರ್ಷಗಳಿಂದ ಗಣೇಶ ಮಹೋತ್ಸವವನ್ನು ಆಚರಿಸುತ್ತಿದ್ದಾರೆ. ಮಹೋತ್ಸವದ ಅಂಗವಾಗಿ ಗ್ರಾಮದ ದೇವಾಲಯಗಳಿಗೆ ವಿಶೇಷ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು. ದಿನನಿತ್ಯ ವಿಶೇಷ ಪೂಜೆ, ಪ್ರಸಾದ ವಿನಿಯೋಗ ಕಾರ್ಯಕ್ರಮ ಮತ್ತು ಗ್ರಾಮದ ಮಕ್ಕಳು ಸಾಂಸ್ಕೃತಿಕರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು.

ವಿಸರ್ಜನಾ ಕಾರ್ಯಕ್ರಮದ ಅಂಗವಾಗಿ ಗಣೇಶ ಮೂರ್ತಿಯನ್ನು ಮುತ್ತಿನ ಪಲ್ಲಕ್ಕಿ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಇದರೊಟ್ಟಿಗೆ ಗ್ರಾಮ ದೇವತೆಗಳಾದ ಶ್ರೀ ಮಾರಮ್ಮ, ಶ್ರೀ ಮುತ್ಯಾಲಮ್ಮ, ಶ್ರೀ
ಆಂಜನೇಸ್ವಾಮಿ, ಹಲಗೆ ದೇವರು, ಹುಲಿವಾಹನ ದೇವರ ಉತ್ಸವ ಮೂರ್ತಿಗಳು ಇದ್ದವು. ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿದವು. ನಂತರ ಗಣಪತಿ ಮೂರ್ತಿಯನ್ನು ದೊಡ್ಡಕೆರೆಯಲ್ಲಿ ವಿಸರ್ಜಿಸಲಾಯಿತು.

ವಿಸರ್ಜನೆಯ ಅಂಗವಾಗಿ ಭಕ್ತರಿಗೆ ಹೆಸರುಬೇಳೆ, ಪಾನಕ, ಮಜ್ಜಿಗೆ, ಅನ್ನಪ್ರಸಾದ ವಿತರಣೆ ನೆರೆವೇರಿತು. ಮೆರವಣಿಗೆಯಲ್ಲಿ ಸಂಘದ ಪದಾಧಿಕಾರಿಗಳಾದ ಭಾಸ್ಕರ, ಯಜಮಾನ ಹೊನ್ನಪ್ಪ, ರೇವಣ್ಣ, ಗ್ರಾಮಪ ಪ್ರಮುಖರಾದ ಅರ್ಕೇಶ್‌, ನಾಗೇಶ್‌ ಮುಂತಾದವರು ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next