Advertisement

ಭಿನ್ನಾಭಿಪ್ರಾಯ ಬಹುತೇಕ ಶಮನ: ಲಕ್ಷ್ಮೀ ಹೆಬ್ಟಾಳಕರ

06:15 AM Sep 16, 2018 | Team Udayavani |

ಬೆಳಗಾವಿ: ತಾಲೂಕಿನ ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ವಿಷಯ ಈಗ ಮುಗಿದ ಅಧ್ಯಾಯ. ಭಿನ್ನಾಭಿಪ್ರಾಯ ಬಹುತೇಕ ಶಮನವಾಗಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಹೇಳಿದರು.

Advertisement

ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, “ರಾಷ್ಟ್ರಪತಿಗಳ ಕಾರ್ಯಕ್ರಮದಲ್ಲಿ ಶಾಸಕ ಸತೀಶ ಜಾರಕಿಹೊಳಿ ಅವರ ಜತೆ ಕುಳಿತಿರುವುದಕ್ಕೆ ಯಾವುದೇ ಬೇರೆ ಅರ್ಥವಿಲ್ಲ. ಕುರ್ಚಿ ಖಾಲಿ ಇತ್ತು. ಹೀಗಾಗಿ ಅಲ್ಲಿ ಕುಳಿತಿದ್ದೆ. ನಾನು ಸಚಿವ ಸ್ಥಾನಕ್ಕೆ ಆಸೆ ಪಟ್ಟವಳಲ್ಲ. ಪಕ್ಷದ ಕಾರ್ಯಕರ್ತೆಯಾಗಿ ವರಿಷ್ಠರು ಹೇಳಿದ ಕೆಲಸ ಮಾಡುತ್ತೇನೆ. ಪಕ್ಷದ ನೀತಿಗಳಿಗೆ ವಿರುದ್ಧವಾಗಿ ಎಂದೂ ನಡೆದುಕೊಳ್ಳುವುದಿಲ್ಲ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next