Advertisement

ಕದ್ರಿ: ಚರಂಡಿಯಲ್ಲಿ ಗಲೀಜು ನೀರು; ಸ್ಥಳೀಯರಿಗೆ ಸಮಸ್ಯೆ

09:55 AM Oct 13, 2022 | Team Udayavani |

ಮಹಾನಗರ: ಶ್ರೀ ಕ್ಷೇತ್ರ ಕದ್ರಿಯ ಸಮೀಪದ ಕದ್ರಿಪಾದೆ ಮತ್ತು ಮಂಜುಶ್ರೀ ಬಡಾವಣೆಗಳ ವ್ಯಾಪ್ತಿಯಲ್ಲಿರುವ ಬೃಹತ್‌ ಚರಂಡಿಯಲ್ಲಿ ಒಳಚರಂಡಿ ನೀರು ಹರಿಯುತ್ತಿದ್ದು, ಸ್ಥಳೀಯ ನಿವಾಸಿಗಳಿಗೆ ನಿತ್ಯ ಸಮಸ್ಯೆಯಾಗಿ ಕಾಡುತ್ತಿದೆ.

Advertisement

ಕೆಲವು ಫ್ಲ್ಯಾಟ್‌ನವರು ಡ್ರೈನೇಜ್‌ ನೀರನ್ನು ಚರಂಡಿಗೆ ಬಿಡುತ್ತಿದ್ದಾರೆ. ಮಳೆಗಾಲದಲ್ಲಿ ತೋಡು ತುಂಬಾ ನೀರು ಹರಿಯುವುದರಿಂದ ಅಷ್ಟು ಸಮಸ್ಯೆ ಆಗುವುದಿಲ್ಲ.ಆದರೆ ಮಳೆ ನಿಂತ ಅನಂತರ ತೋಡಿನಲ್ಲಿ ನೀರಿನ ಹರಿಯುವಿಕೆ ಕಡಿಮೆಯಾಗಿ ಡ್ರೈನೇಜ್‌ನ ಕೊಳಕು ವಾಸನೆ ನೀರು ಹರಿಯುತ್ತದೆ. ಅಲ್ಲದೆ ಸೊಳ್ಳೆಗಳ ಉತ್ಪತ್ತಿಯಾಗಿ ತೋಡಿನ ಹತ್ತಿರದ ಮನೆಗಳಲ್ಲಿ ವಾಸಿಸಲು ಅಸಾಧ್ಯವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಈ ಬಗ್ಗೆ ಸ್ಥಳೀಯ ಕಾರ್ಪೋರೆಟರ್‌, ಮೇಯರ್‌ ಅವರ ಗಮನಕ್ಕೂ ತರಲಾಗಿತ್ತು. ಪರಿಣಾಮವಾಗಿ ಕದ್ರಿ ದೇಗುಲದ ಮುಂಭಾಗ ಒಂದು ಸೇತುವೆ ನಿರ್ಮಾಣ ಮಾಡಲಾಗಿದೆ. ಆದರೆ ಸಮಸ್ಯೆ ಹಾಗೆಯೇ ಉಳಿದಿದೆ. ಈಗ ಮಳೆ ಕಡಿಮೆಯಾಗಿ ತೋಡಲ್ಲಿ ಡ್ರೈನೇಜ್‌ ನೀರು ಮಾತ್ರ ಹರಿಯುತ್ತಿದೆ ಎಂದು ಕದ್ರಿಪಾದೆ ಮತ್ತು ಮಂಜುಶ್ರೀ ಬಡಾವಣೆಗಳ ನಿವಾಸಿಗಳು ದೂರಿದ್ದಾರೆ.

ಇನ್ನಾದರೂ ಮೇಯರ್‌, ಆರೋಗ್ಯಾಧಿಕಾರಿ, ಸ್ಥಳೀಯ ಕಾರ್ಪೋರೆಟರ್‌ಗಳು ಈ ಬಗ್ಗೆ ಸ್ಥಳ ಪರಿಶೀಲಿಸಿ ಸಮಸ್ಯೆ ಪರಿಹಾರಕ್ಕೆ ತುರ್ತು ಮಾರ್ಗೋಪಾಯಗಳನ್ನು ಕಂಡು ಕೊಳ್ಳುವಂತೆ ಅವರು ಮನವಿಯಲ್ಲಿ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next