Advertisement
ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಕಳೆದ ಜುಲೈ 12ರಂದು ತ್ರಿಚಕ್ರ ವಾಹನಗಳ ವಿತರಣೆ ಕಾರ್ಯಕ್ರಮ ಸಾಂಕೇತಿಕವಾಗಿ ನಡೆದಿತ್ತು. ಆದರೆ ಇದುವರೆಗೂ ಫಲಾನುಭವಿಗಳಿಗೆ ತಲುಪಿಲ್ಲ.
ಇಲಾಖೆಯವರು ಕಂಪೆನಿಯವರಲ್ಲಿ ವಾಹನದ ಆರ್ಸಿಗಾಗಿ ಬೇಡಿಕೆ ಇಟ್ಟಾಗ ಕಂಪೆನಿಯವರು “ಇಡೀ ರಾಜ್ಯಕ್ಕೆ ಒಂದೇ ಬಾರಿ ನೀಡುತ್ತೇವೆ’ ಎಂದು ಉತ್ತರಿಸುತ್ತಾ ಬಂದಿದ್ದಾರೆ.
Related Articles
Advertisement
ಸದ್ಯ ಇನ್ಶೂರೆನ್ಸ್ ದಾಖಲೆ ನೀಡಲು ಮುಂದಾಗಿದ್ದು, ಈ ದಾಖಲೆಯ ಆಧಾರದಲ್ಲಿ ವಾಹನಗಳನ್ನು ವಿತರಿಸಲು ಇಲಾಖಾಧಿಕಾರಿಗಳು ನಿರ್ಧರಿಸಿದ್ದಾರೆ. ಆದರೆ ಆರ್ಸಿ ಇಲ್ಲದೆ ವಾಹನ ರಸ್ತೆಗಳಿದರೆ ಫಲಾನುಭವಿಗಳು ಮತ್ತೆ ತೊಂದರೆಗೆ ಒಳಗಾಗುವ ಅಪಾಯವೂ ಇದೆ.
ತಲುಪಿಸಲು ಶೀಘ್ರ ಕ್ರಮವಾಹನಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಕಂಪೆನಿಯವರು ನೀಡದೆ ಇದ್ದುದರಿಂದ ವಾಹನಗಳನ್ನು ಫಲಾನುಭವಿಗಳಿಗೆ ನೀಡಲು ಸಾಧ್ಯ ವಾಗಿರಲಿಲ್ಲ. ಇದೀಗ ಇನ್ಶೂರೆನ್ಸ್ ದಾಖಲೆ ಪಡೆಯಲಾಗಿದ್ದು ಶೀಘ್ರದಲ್ಲೇ ಫಲಾನುಭವಿಗಳಿಗೆ ವಾಹನ ತಲುಪಿಸಲಾಗುವುದು. ವಾಹನಗಳು ಕೆಟ್ಟು ಹೋಗದಂತೆ ಅವುಗಳ ಬ್ಯಾಟರಿ ತೆಗೆದಿಡಲಾಗಿದೆ. ಹಾಳಾಗದಂತೆ ನೋಡಿಕೊಳ್ಳಲಾಗಿದೆ.
-ಗೋಪಾಲಕೃಷ್ಣ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ