Advertisement

Kasaragod ಕೇಂದ್ರ ಗೃಹ ಸಚಿವಾಲಯದ ನಿರ್ದೇಶನ: ಕಾಸರಗೋಡಿನಲ್ಲಿ ಕ್ಷಿಪ್ರಪಡೆ ಪಥಸಂಚಲನ

11:11 PM Sep 12, 2023 | Team Udayavani |

ಕಾಸರಗೋಡು: ಕೇಂದ್ರ ಗೃಹಸಚಿವಾಲಯದ ನಿರ್ದೇಶನದ ಅನುಸಾರ ಪ್ರಕಾರ ಕಾಸರಗೋಡು ನಗರ, ಕುಂಬಳೆ, ಉಪ್ಪಳ ಪೇಟೆಯಲ್ಲಿ ಕೇಂದ್ರ ಕ್ಷಿಪ್ರ ಕಾರ್ಯಾಚರಣೆ ಪಡೆ ಪಥಸಂಚಲನ ನಡೆಸಿತು.

Advertisement

ಅಸಿಸ್ಟೆಂಟ್‌ ಕಮಾಂಡೆಂಟ್‌ ಎಂ. ಭಾರತಿ ನೇತೃತ್ವದಲ್ಲಿ 68 ಮಂದಿ ಸದಸ್ಯರ ಕ್ಷಿಪ್ರ ಕಾರ್ಯಾಚರಣೆ ಪಡೆ ಹೊಸ ಬಸ್‌ ನಿಲ್ದಾಣ, ವಿದ್ಯಾನಗರ ಮೊದಲಾದೆಡೆಗಳಲ್ಲಿ ಪಥಸಂಚಲನ ನಡೆಸಿತು.

ಕೇಂದ್ರ ಕ್ಷಿಪ್ರ ಕಾರ್ಯಾಚರಣೆ ಪಡೆಯ ಚೆನ್ನೈ 97 ಸೇನೆ ಸದಸ್ಯರು ಕಾಸರಗೋಡಿಗೆ ಬಂದಿದ್ದಾರೆ. ದೇಶದಲ್ಲಿ ತಲೆಯೆತ್ತುತ್ತಿರುವ ಸನಾತನ ಧರ್ಮ ವಿವಾದ, ಸಮುದಾಯ ಸ್ಪರ್ಧೆ, ರಾಜಕೀಯ ಘರ್ಷಣೆ ಸಾಧ್ಯತೆ, ಕಾನೂನು ಪಾಲನೆ, ಸಾರ್ವಜನಿಕರ ಭೀತಿ ನಿವಾರಣೆ ಮೊದಲಾದ ಗುರಿಯೊಂದಿಗೆ ಪಥ ಸಂಚಲನ ನಡೆಸಲಾಗಿದೆ. ಕಾಸರಗೋಡು ಪೊಲೀಸರು ಜತೆಗೂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next