Advertisement

ಕಾನೂನು ಪ್ರಕಾರವೇ ಡಿನೋಟಿಫೈ ಮಾಡಿಕೊಟ್ಟಿದ್ದಾರೆ

07:10 AM Aug 19, 2017 | |

ಬೆಂಗಳೂರು: “ನನಗೆ ಕಾನೂನು ಬದ್ಧವಾಗಿಯೇ ಜಮೀನು ಡಿನೋಟಿಫೈ ಮಾಡಿ ಕೊಟ್ಟಿರುವುದಾಗಿ ಯಡಿಯೂರಪ್ಪ ಅವರೇ ಹೇಳಿದ್ದಾರೆ’ ಎಂದು ಸಚಿವ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ. 

Advertisement

ಬಿಜೆಪಿ ತಮ್ಮ ವಿರುದ್ಧ ಪ್ರತಿಭಟನೆ ನಡೆಸಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, “ನನಗೆ ಜಮೀನು ಡಿನೊಟಿಫಿಕೇಶನ್‌ ಮಾಡಿಕೊಟ್ಟು ಯಡಿಯೂರಪ್ಪ ಸಂಕಷ್ಟಕ್ಕೆ ಸಿಲುಕಿದರು. ನಾನೂ ಕಷ್ಟ ಅನುಭವಿಸಬೇಕಾಯಿತು. ಅದಕ್ಕೆ ಯಾರು ಕಾರಣ ಅಂತ ಜಗತ್ತಿಗೇ ಗೊತ್ತು. ಬಿಜೆಪಿಯವರಿಗೆ ಪ್ರತಿಭಟನೆ ಮಾಡುವ ಹಕ್ಕಿದೆ ಮಾಡಲಿ. ಯಡಿಯೂರಪ್ಪನವರು ನಮ್ಮನ್ನು ಜೈಲಿಗೆ ಕಳುಹಿಸುವುದು ಮಾತ್ರವಲ್ಲ ಹೊಸ ಜೈಲನ್ನೇ ಬೇಕಾದರೂ ಕಟ್ಟಲಿ’ ಎಂದು ಹೇಳಿದರು.

ಭ್ರಷ್ಟಾಚಾರದ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಸಚಿವರು ರಾಜೀನಾಮೆ ಕೊಡುವ ಅಗತ್ಯವಿಲ್ಲ. ಅಮಿತ್‌ ಶಾ ಹೇಳಿದ ಮಾತ್ರಕ್ಕೆ ರಾಜಕೀಯ ಕಾರಣಗಳಿಗೆ ಪ್ರತಿಭಟನೆ ಮಾಡುವುದು ಸರಿಯಲ್ಲ.
–  ರಾಮಲಿಂಗಾ ರೆಡ್ಡಿ, ಸಾರಿಗೆ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next