Advertisement

ಕ್ವಾರಂಟೈನ್‌ನಲ್ಲಿರುವ 150 ಜನರಿಗೆ ಭೋಜನ ವ್ಯವಸ್ಥೆ

05:14 AM May 19, 2020 | Suhan S |

ಬಾದಾಮಿ: ತಾಲೂಕಿನ ಚಿಕ್ಕ ಮುಚ್ಚಳಗುಡ್ಡ ಗ್ರಾಮದ ಕ್ವಾರಂಟೈನ್‌ ಕೇಂದ್ರದಲ್ಲಿರುವ 150 ಜನರಿಗೆ ಉಪಹಾರ, ಊಟದ ವ್ಯವಸ್ಥೆಯನ್ನು ಸಿದ್ದರಾಮಯ್ಯ ಅಭಿಮಾನಿ ಬಳಗ ಕಲ್ಪಿಸಿದೆ.

Advertisement

ಮತಕ್ಷೇತ್ರದ ಪ್ರತಿ ಕುಟುಂಬಕ್ಕೆ ಮಾಸ್ಕ್ ಮತ್ತು 114 ಗ್ರಾಮಗಳು ಮತ್ತು ಮೂರು ಪಟ್ಟಣಗಳಿಗೆ ಊಟದ ವ್ಯವಸ್ಥೆ, ಆಹಾರ ಕಿಟ್‌, ಗೋವಾದಲ್ಲಿ ವಾಸಿಸುತ್ತಿರುವ ಮತಕ್ಷೇತ್ರದ ಜನರಿಗೆ ಆಹಾರ ಕಿಟ್‌ ನೀಡುವ ಮೂಲಕ ಜನರ ಸಂಕಷ್ಟದಲ್ಲಿ ಸಹಾಯ ಮಾಡುತ್ತಿದ್ದಾರೆ. ಇದಲ್ಲದೇ ಬಡಜನರಿಗೆ, ಆರೋಗ್ಯ ಇಲಾಖೆ, ಪೋಲಿಸ್‌, ಕಂದಾಯ ಇಲಾಖೆಯ ಸಿಬ್ಬಂದಿಗಳಿಗೆ ಗುಣಮಟ್ಟದ ಮಾಸ್ಕ ವಿತರಣೆ, ಪಿಪಿಇ ಕಿಟ್‌ ವಿತರಣೆ ಮಾಡಿದ್ದಾರೆ.

ಕೋವಿಡ್ ರೋಗದಿಂದ ಜನರು ತೊಂದರೆಗೆ ಒಳಗಾಗಿದ್ದು, ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯನವರ ನಿರ್ದೇಶನದ ಮೇರೆಗೆ ಅಭಿಮಾನಿ ಬಳಗದಿಂದ ಸಾರ್ವಜನಿಕರಿಗೆ ಆಹಾರ ಕಿಟ್‌, ಊಟದ ವ್ಯವಸ್ಥೆ, ಚಿಕ್ಕಮುಚ್ಚಳಗುಡ್ಡದಲ್ಲಿರುವ ಕ್ವಾರಂಟೈನ್‌ ನಲ್ಲಿರುವವರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಅಭಿಮಾನಿಗಳ ಬಳಗದ ಮುಖಂಡ ಹೊಳಬಸು ಶೆಟ್ಟರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next