Advertisement

ರಮೇಶ್ ಜಾರಕಿಹೊಳಿ ವಿರುದ್ಧದ ದೂರನ್ನು ವಾಪಸ್ ಪಡೆದ ದಿನೇಶ್ ಕಲ್ಲಳ್ಳಿ

03:03 PM Mar 07, 2021 | Team Udayavani |

ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಿಡಿ ವಿಚಾರವಾಗಿ ದೂರು ನೀಡಿದ್ದ ದಿನೇಶ್ ಕಲ್ಲಳ್ಳಿ ಇಂದು ದೂರನ್ನು ವಾಪಸ್ ಪಡೆದಿದ್ದಾರೆ.

Advertisement

ಕಳೆದ ಮಾರ್ಚ್ 2 ರಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಿದ್ದರು. ಪೊಲೀಸರು ಎಫ್ ಐ ಆರ್ ದಾಖಲಿಸುವ ಮುನ್ನವೇ, ಕೇಲವ ಆರು ದಿನಕ್ಕೆ ದೂರನ್ನು ವಾಪಸ್ ಪಡೆದಿರುವುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.

ತಮ್ಮ ವಕೀಲರ ಮುಕಾಂತರ ದಿನೇಶ್ ಕಲ್ಲಳ್ಳಿ ದೂರನ್ನು ವಾಪಸ್ ಪಡೆಯುವಂತೆ ಪತ್ರವನ್ನು ರವಾನೆ ಮಾಡಿದ್ದಾರೆ. ಇನ್ನು ದಿನೇಶ್ ತಮ್ಮ ದೂರನ್ನು ಯಾಕೆ ವಾಪಸ್ ಪಡೆದ್ರು ಅನ್ನೋದು ಸದ್ಯದ ಕುತೂಹಲ.

Advertisement

Udayavani is now on Telegram. Click here to join our channel and stay updated with the latest news.

Next