Advertisement

ಭಗವಂತ ಖೂಬಾ ಹೇಳಿಕೆಗೆ ದಿನೇಶ್‌ ಗುಂಡೂರಾವ್‌ ಆಕ್ರೋಶ

10:36 PM Oct 27, 2021 | Team Udayavani |

ಬೆಂಗಳೂರು: ಬೆಲೆ ಏರಿಕೆ ಎಲ್ಲಿದೆ ಎಂದಿರುವ ಸಚಿವ ಭಗವಂತ ಖೂಬಾ ಯಾವ ಗ್ರಹದಲ್ಲಿದ್ದಾರೆ. ಜನ ಬೆಲೆ ಏರಿಕೆಯ ವಿರುದ್ಧ ಬೀದಿಗಿಳಿದಿರುವುದು ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಪ್ರಶ್ನಿಸಿದ್ದಾರೆ.

Advertisement

ಬೆಲೆ ಏರಿಕೆಯ ವಿರುದ್ಧ ಜನ ಅಸಹನೆ ಆಕ್ರೋಶದ ರೂಪ ಪಡೆಯುತ್ತಿದೆ. ಇಷ್ಟಾದರೂ ಅದ್ಯಾವ ಭಂಡತನದಿಂದ ಬೆಲೆ ಏರಿಕೆ ಆಗಿಲ್ಲ ಎಂದು ಹೇಳುತ್ತೀರಿ ಎಂದಿದ್ದಾರೆ.

80 ರೂ. ಇದ್ದ ಅಡುಗೆ ಎಣ್ಣೆ 180 ರೂ. ಆಗಿದೆ. 75 ರೂ. ಇದ್ದ ಪೆಟ್ರೋಲ್‌ 113 ರೂ .ಆಗಿದೆ. 60 ರೂ. ಇದ್ದ ಡೀಸೆಲ್‌ 103 ರೂ. ಆಗಿದೆ. 500 ರೂ. ಇದ್ದ ಅಡುಗೆ ಅನಿಲ ಸಿಲಿಂಡರ್‌ 910 ರೂ. ಆಗಿದೆ. ಇದು ಬೆಲೆ ಏರಿಕೆ ಅಲ್ಲವೇ ಖೂಬಾ ಅವರೇ ಎಂದು ಕೇಳಿದ್ದಾರೆ.

ಇದನ್ನೂ ಓದಿ:ಮಹಿಳೆಯರು, ಸಾಮಾನ್ಯ ಜನರಿಗೆ ಸಣ್ಣ ಸಾಲ : ಶಾಸಕ ಕೆ.ರಘುಪತಿ ಭಟ್‌ ಸಲಹೆ

ನೀವು ಸಚಿವರು, ಇದು ನಿಮಗೆ ದುಬಾರಿ ಎನಿಸದಿರಬಹುದು. ಆದರೆ, ಜನಸಾಮಾನ್ಯರ ಪಾಡೇನು, ಅವರೇನು ನಿಮ್ಮಷ್ಟು ಸಿರಿವಂತಿಕೆಯ ಕುಳಗಳೇ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next