Advertisement

ಕುಂಬಾರಿಕಾ ಕಾರ್ಯಾಗಾರ ಘಟಕಕ್ಕೆ ದಿನೇಶ್‌ ಗುಂಡೂರಾವ್‌ ಭೇಟಿ

09:55 AM Nov 08, 2019 | sudhir |

ಹೆಬ್ರಿ: ರಾಜ್ಯದ ಏಕೈಕ ಆಧುನಿಕ ಮಾದರಿಯ ಕುಂಬಾರಿಕಾ ಕೈಗಾರಿಕೆ ಘಟಕ ಅದ್ಬುತವಾಗಿ ನಿರ್ಮಾಣವಾಗಿದೆ. ಇಂತಹ ಘಟಕ ರಾಜ್ಯದ ಎಲ್ಲ ಕಡೆ ನಿರ್ಮಾಣವಾಗಬೇಕಾಗಿದ್ದು, ಇದಕ್ಕೆ ಸರಕಾರ ನೆರವು ನೀಡಬೇಕು ಎಂದು ಕೆ.ಪಿ.ಸಿ.ಸಿ. ರಾಜ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು.

Advertisement

ಅವರು ಪೆರ್ಡೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ನೂತನ ಕುಂಬಾರಿಕೆ ಕಾರ್ಯಾಗಾರ ಘಟಕಕ್ಕೆ ಭೇಟಿ ನೀಡಿ ಮಾತನಾಡಿದರು.
ಬೆಂಗಳೂರು ಕುಂಬಾರರ ಮಹಾ ಸಂಘದ ಉಪಾಧ್ಯಕ್ಷ ರಾಮ ಕುಲಾಲ್‌ ಪಕ್ಕಾಲು, ಕೆಪಿಸಿಸಿ ಕಾರ್ಯದರ್ಶಿ ಎಂ.ಎ. ಗಫ‌ೂರ್‌, ಪೆರ್ಡೂರು ಮಾಜಿ ಮಂಡಲ ಪ್ರಧಾನ ಶಾಂತಾರಾಮ ಸೂಡ, ಪ್ರಮೋದ್‌ ರೈ ಪಳಜೆ, ಪೆರ್ಡೂರು ಕುಂಬಾರಿಕಾ ಗುಡಿ ಕೈಗಾರಿಕೆ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ ಕುಲಾಲ್‌ ಪಕ್ಕಾಲು, ಉಪಾಧ್ಯಕ್ಷ ಶಂಕರ್‌ ಕುಲಾಲ್‌ ಪೆರಂಪಳ್ಳಿ, ನಿರ್ದೇಶಕರಾದ ಉದಯ
ಕುಲಾಲ್‌ ಕುಡ್ತಾರ್‌ಬೆ„ಲು, ಸುಧಾಕರ ಕುಲಾಲ್‌ ಕನ್ನಾರು, ಸಂಸ್ಥೆಯ
ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕುಲಾಲ್‌ ಪಟ್ಲ , ಸಮಾಜದ ನಾಯಕರಾದ ರಾಜು ಕುಲಾಲ್‌, ಯೋಗೀಶ್‌ ಕುಲಾಲ್‌, ಹರೀಶ್‌ ಕುಲಾಲ್‌, ಕಾಳು ಕುಲಾಲ್‌, ಕೃಷ್ಣಪ್ಪ ಕುಲಾಲ್‌, ಕೃಷ್ಣ ಕುಲಾಲ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next