Advertisement

Karnataka Politics: ಕಾಂಗ್ರೆಸ್‌ಗೆ ಆಪರೇಷನ್ ಹಸ್ತದ ಅವಶ್ಯಕತೆ ಇಲ್ಲ: ದಿನೇಶ್ ಗುಂಡೂರಾವ್

02:44 PM Oct 18, 2023 | Team Udayavani |

ಮಂಗಳೂರು: ಕಾಂಗ್ರೆಸ್‌ಗೆ ಆಪರೇಷನ್ ಹಸ್ತ ಮಾಡುವ ಅವಶ್ಯಕತೆ ಇಲ್ಲ. ಬಿಜೆಪಿ ಅಪರೇಷನ್ ಕಮಲದ ಮೂಲಕವೇ ರಾಜಕೀಯ ವ್ಯವಸ್ಥೆಯನ್ನು ಎಷ್ಟು ಹಾಳು ಮಾಡಿದೆ ಎಂಬುದನ್ನು ದೇಶ ನೋಡಿದೆ. ಹಣ ಕೊಟ್ಟು ಬೆದರಿಸಿ ಅಪರೇಷನ್ ಮಾಡುವುದರಲ್ಲಿ ಬಿಜೆಪಿಯವರು ನಿಸ್ಸೀಮರು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

Advertisement

ಮಂಗಳೂರಿನಲ್ಲಿ ಬುಧವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು ಕಾಂಗ್ರೆಸ್‌ಗೆ ಸ್ವಯಂ ಪ್ರೇರಣೆಯಿಂದ ಬರುವವರ ಜತೆ ಮಾತನಾಡಬಹುದು. ಆದರೆ, ಯಾವುದೇ ಪಕ್ಷವನ್ನು ಒಡೆಯುವ ಅಥವ ಸೆಳೆಯುವ ಅಗತ್ಯ ನಮಗಿಲ್ಲ ಎಂದರು.

ಜೆಡಿಎಸ್‌ನಿಂದ ಎಷ್ಟು ಜನ ಬರಲಿದ್ದಾರೆ ಎಂಬುದು ಗೊತ್ತಿಲ್ಲ. ಆ ಪಕ್ಷದಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ಸಮಾಧಾನ ಇಲ್ಲದಿರಬಹುದು. ರಾಜಕೀಯದಲ್ಲಿ ಈ ರೀತಿಯ ಬೆಳವಣಿಗೆ ಇದ್ದೇ ಇರುತ್ತದೆ. ಅಪರೇಷನ್ ಹಸ್ತ ಮಾಡುವ ಅಗತ್ಯ ನಮಗಿಲ್ಲ ಎಂದವರು ಹೇಳಿದರು.

ಪಂಚ ರಾಜ್ಯಗಳಲ್ಲಿ ಬಿಜೆಪಿಗೆ ಸೋಲಿನ ಭೀತಿ ಕಾಡತೊಡಗಿದೆ. ಆಧಾರ ರಹಿತ ಆರೋಪ ಮಾಡುವುದು ಬಿಜೆಪಿಗೆ ಚಾಳಿಯಾಗಿದೆ ಎಂದವರು ದೂರಿದರು.

ಇದನ್ನೂ ಓದಿ: Siddaramaiah: ಕ್ರೀಡಾಪಟುಗಳಿಗೆ ಎಲ್ಲಾ ಇಲಾಖೆಗಳ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ; ಸಿಎಂ

Advertisement
Advertisement

Udayavani is now on Telegram. Click here to join our channel and stay updated with the latest news.

Next