Advertisement

ಸಮಾಜಕ್ಕೆ ಬೇಕಿರುವುದು ಧರ್ಮದ ಶಾಂತಿ ಸಂದೇಶವೇ ಹೊರತು ಕೊಚ್ಚು,ಕೊಲ್ಲು ಸಂಸ್ಕಾರವಲ್ಲ: ದಿನೇಶ್

09:48 AM Feb 23, 2022 | Team Udayavani |

ಬೆಂಗಳೂರು: ಸಮಾಜಕ್ಕೆ ಬೇಕಿರುವುದು ಧರ್ಮದ ಶಾಂತಿ ಸಂದೇಶವೇ ಹೊರತು ಕೊಚ್ಚು, ಕೊಲ್ಲು ಸಂಸ್ಕಾರವಲ್ಲ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

Advertisement

ಶಿವಮೊಗ್ಗ ಗಲಭೆ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ಶಿವಮೊಗ್ಗದಲ್ಲಿ ಹತ್ಯೆಯಾದ ಮೃತ ಹರ್ಷನ ಸೋದರಿ ಅಶ್ವಿನಿಯ ಮಾತೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮೃತ ಹರ್ಷನ ಸೋದರಿ ವ್ಯಕ್ತಪಡಿಸಿರುವ ಅಭಿಪ್ರಾಯ ಅತ್ಯಂತ ಪ್ರಸ್ತುತ. ಕೆಲ ಮತಾಂಧ ಶಕ್ತಿಗಳು ಮುಗ್ದರ ತಲೆಯಲ್ಲಿ ಮತಾಂಧತೆಯನ್ನು ತುಂಬುತ್ತಾ ಕೋಮುದ್ವೇಷ ಹರಡುತ್ತಿದ್ದಾರೆ. ಆದರೆ ಅಮಾಯಕರೇ ಈ ಮತಾಂಧ ಶಕ್ತಿಗಳ ಷಡ್ಯಂತ್ರದ ಬಲಿ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಯುಪಿ ಚುನಾವಣೆ: ರೈತರ ಪ್ರತಿಭಟನೆಗೆ ಸಾಕ್ಷಿಯಾಗಿದ್ದ ಲಖೀಂಪುರ ಖೇರಿಯಲ್ಲಿಂದು ಮತದಾನ

ಕೊಂದು ಉಳಿಸಿಕೊಳ್ಳುವ ಧರ್ಮ ಯಾವುದಾದರೂ ಇದೆಯೆ? ಎಂದು ಪೂರ್ಣಚಂದ್ರ ತೇಜಸ್ವಿ ಪ್ರಶ್ನಿಸಿದ್ದರು. ಪೂಚಂತೆ ಮಾತನ್ನು ಎಲ್ಲಾ ಧರ್ಮದ ಮತಾಂಧ ಶಕ್ತಿಗಳು ಅರಿತುಕೊಳ್ಳಬೇಕು. ಸಮಾಜಕ್ಕೆ ಬೇಕಿರುವುದು ಧರ್ಮದ ಶಾಂತಿ ಸಂದೇಶವೇ ಹೊರತು ಕೊಚ್ಚು, ಕೊಲ್ಲು ಸಂಸ್ಕಾರವಲ್ಲ. ಮತಾಂಧ ಶಕ್ತಿಗಳು ಅಮಾಯಕರ ಸಮಾಧಿ ಮೇಲೆ ಸೌಧ ಕಟ್ಟುವುದನ್ನು ನಿಲ್ಲಿಸಲಿ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next