Advertisement

ಪ್ರಾಮಾಣಿಕತೆಯಿಲ್ಲ; ಜಿಟಿಡಿ ಹೇಳಿಕೆಗೆ ದಿನೇಶ್‌ ತೀವ್ರ ಅಸಮಾಧಾನ

09:09 AM May 02, 2019 | Team Udayavani |

ಬೆಂಗಳೂರು: ಜೆಡಿಎಸ್‌ ಕಾರ್ಯಕರ್ತರು ಬಿಜೆಪಿಗೆ ಮತಹಾಕಿದ್ದಾರೆ ಎನ್ನುವ ಸಚಿವ ಜಿ.ಟಿ.ದೇವೇಗೌಡ ಅವರ ಹೇಳಿಕೆ ಸಂಚಲನ ಮೂಡಿಸಿದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್‌ ಗುಂಡೂರಾವ್‌, ಬಹಳ ಮುಂಚೆಯೇ ಮೈತ್ರಿ ತೀರ್ಮಾನವಾಗಿದ್ದುತಡವಾಗಿರಲಿಲ್ಲ. ಮೈಸೂರು ಕ್ಷೇತ್ರ ಕಾಂಗ್ರೆಸ್‌ಗೆ ಎಂದು ಬಹಳ ಹಿಂದೆ ಘೋಷಣೆ ಆಗಿತ್ತು. ಜಿ..ಟಿ.ದೇವೇಗೌಡ ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಅವರ ಹೇಳಿಕೆಯಲ್ಲಿ ದ್ವಂದ್ವ ಇದೆ ಎಂದರು.

ಖಂಡಿತವಾಗಿಯೂ ಇಂತಹ ಹೇಳಿಕೆಗಳು ಮೈತ್ರಿ ಸರ್ಕಾರಕ್ಕೆಒಳ್ಳೆಯದಲ್ಲ. ಪ್ರಾಮಾಣಿಕತೆಯಿಂದ ಕೆಲಸ ಆಗಿಲ್ಲ ಎನ್ನುವುದು ಅವರ ಹೇಳಿಕೆಯಿಂದ ಅರ್ಥವಾಗುತ್ತದೆ. ನಾವು ಜೊತೆಯಾಗಿ ಕೆಲಸ ಮಾಡಿದ್ದರೆ 24 ರಿಂದ 25 ಸೀಟುಗಳನ್ನು ಗೆಲ್ಲಬಹುದಾಗಿತ್ತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next