Advertisement

Maharashtra ಸರಕಾರದಿಂದ ರಾಜ್ಯಕ್ಕೆ ಬರುತ್ತಿದ್ದ ನೀರಿಗೆ ತಡೆ: ಬೆಳಗಾವಿಯಲ್ಲಿ ಆಕ್ರೋಶ

07:14 PM May 26, 2024 | Team Udayavani |

ಬೆಳಗಾವಿ: ಕೃಷ್ಣಾ ನದಿಯಿಂದ ರಾಜಾಪುರ ಬ್ಯಾರೇಜ್ ಮೂಲಕ ಕರ್ನಾಟಕಕ್ಕೆ ಹರಿದು ಬರುತ್ತಿದ್ದ ನೀರನ್ನು ತಡೆ ಮಹಾರಾಷ್ಟ್ರ ಸರಕಾರ ತಡೆಹಿಡಿದಿದ್ದು ಇದಕ್ಕೆ ಗಡಿ ಭಾಗದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Advertisement

ಕಳೆದ ಎರಡು ದಿನಗಳಿಂದ ರಾಜಾಪುರ ಬ್ಯಾರೇಜ್ ಮೂಲಕ ಕೃಷ್ಣಾ ನದಿಗೆ ಸುಮಾರು ಎರಡು ಸಾವಿರ ಕ್ಯೂಸೆಕ್ಸ ಹೆಚ್ಚುವರಿ ನೀರು ಹರಿದು ಬರುತ್ತಿತ್ತು. ಆದರೆ ರವಿವಾರ ಮಹಾರಾಷ್ಟ್ರ ಸರ್ಕಾರ ಏಕಾಏಕಿ ನೀರನ್ನು ತಡೆ ಹಿಡಿದು ಕರ್ನಾಟಕ ರಾಜ್ಯದ ವಿರುದ್ದ ಮತ್ತೆ ಜಲತಂಟೆ ಮುಂದುವರಿಸಿದೆ ಎಂದು ರೈತರು ಮತ್ತು ಕನ್ನಡ ಹೋರಾಟಗಾರರು ಆರೋಪ ಮಾಡಿದ್ದಾರೆ.

ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದಲ್ಲಿರುವ ರಾಜಾಪೂರ ಬ್ಯಾರೇಜಗೆ ಗೇಟ್ ಅಳವಡಿಸಿಕೊಳ್ಳುವ ಮೂಲಕ ರಾಜ್ಯಕ್ಕೆ ಹರಿದು ಬರುವ ನೀರನ್ನು ತಡೆಹಿಡಿದಿರುವ ಮಹಾರಾಷ್ಟ್ರ ಸರ್ಕಾರ ಅಲ್ಲಿ ನೀರಾವರಿ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಯನ್ನು ಸಹ ನಿಯೋಜನೆ ಮಾಡಿದೆ.

ನೀರನ್ನು ಯಾವ ಕಾರಣಕ್ಕೆ ತಡೆಹಿಡಿಯಲಾಗಿದೆ ಎಂಬುದರ ಬಗ್ಗೆ ಸರಕಾರ ಸ್ಪಷ್ಟನೆ ನೀಡಿಲ್ಲ. ನಾಲ್ವರು ಸಿಬ್ಬಂದಿಯ ಎರಡು ಗಸ್ತು ತಂಡ ನೇಮಕ ಮಾಡಿದ ಮಹಾರಾಷ್ಟ್ರ ಸರ್ಕಾರ ರಾಜ್ಯಕ್ಕೆ ನೀರು ಹೋಗದಂತೆ ನೋಡಿಕೊಳ್ಳುತ್ತಿದೆ. ಗೇಟ್ ಬಂದ್ ಮಾಡುವ ಮುನ್ನ ರಾಜಾಪುರ ಬ್ಯಾರೇಜ್ ದಿಂದ ಹರಿದು ಬರುತ್ತಿದ್ದ ನೀರು ಚಿಕ್ಕೋಡಿ, ವಿಜಯಪುರ, ಬಾಗಲಕೋಟ ಜಿಲ್ಲೆಗಳಿಗೆ ಹರಿದು ಹೋಗುತ್ತಿತ್ತು. ಈಗ ನೀರು ಬರದಂತೆ ತಡೆ ಹಿಡಿದಿರುವ ಪರಿಣಾಮ ಮತ್ತೆ ನದಿಗೆ ನೀರು ಕಡಿಮೆಯಾಗುವ ಸಾಧ್ಯತೆ ಹೆಚ್ಚಿದೆ.

Advertisement

Udayavani is now on Telegram. Click here to join our channel and stay updated with the latest news.

Next