Advertisement

ಗೋವಾದಲ್ಲಿ ಕಾಂಗ್ರೆಸ್‌ ಒಡೆಯಲು ಷಡ್ಯಂತ್ರ: ದಿನೇಶ್‌ ಗುಂಡೂರಾವ್‌ ಆರೋಪ

06:19 PM Jul 11, 2022 | Team Udayavani |

ಬೆಂಗಳೂರು: ಗೋವಾದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಒಡೆಯಲು ಅನೇಕ ವಿಚ್ಛಿದ್ರಕಾರಿ ಶಕ್ತಿಗಳು ಕೈ ಜೋಡಿಸಿವೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಆರೋಪಿಸಿದ್ದಾರೆ.

Advertisement

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಗೋವಾ ಕಾಂಗ್ರೆಸ್‌ನ್ನು ಒಡೆಯುವ ಷಡ್ಯಂತ್ರದ ಹಿಂದೆ ಕೇವಲ ಬಿಜೆಪಿಯಷ್ಟೇ ಅಲ್ಲ, ಇಲ್ಲಿನ ಗಣಿ ಮತ್ತು ಕಲ್ಲಿದ್ದಲಿನ ಲಾಬಿಯೂ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ಗಣಿ ಮಾಫಿಯಾದ ಜೊತೆ ಷಾಮೀಲಾಗಿರುವ ಗೋವಾದ ಬಿಜೆಪಿ ನೇತೃತ್ವದ ಸರ್ಕಾರ ಪ್ರಜಾಪ್ರಭುತ್ವಕ್ಕೆ ಅಪಚಾರ ಎಸಗುತ್ತಿದೆ. ಗೋವಾ ಕಾಂಗ್ರೆಸ್‌ ಈ ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಸದಾ ಹೋರಾಡಲಿದೆ.

ಇದನ್ನೂ ಓದಿ:ನ್ಯಾಷನಲ್ ಹೆರಾಲ್ಡ್ ಪ್ರಕರಣ​: ಜು. 21ಕ್ಕೆ ಹಾಜರಾಗಲು ಸೋನಿಯಾಗೆ ಇ.ಡಿ ನೋಟಿಸ್

ಬಿಜೆಪಿಯ ಷಡ್ಯಂತ್ರಕ್ಕೆ ಗೋವಾ ಕಾಂಗ್ರೆಸ್‌ ಯಾವತ್ತೂ ಮಣಿಯುವುದಿಲ್ಲ ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next