Advertisement

ದಿಗ್ವಿಜಯ್‌ ವಿರುದ್ಧ ಚೌಹಾಣ್‌ ಸ್ಪರ್ಧೆ?

02:09 AM Mar 25, 2019 | Sriram |

ಮಧ್ಯಪ್ರದೇಶ: ಮಧ್ಯಪ್ರದೇಶದ ಭೋಪಾಲ ಕ್ಷೇತ್ರದಿಂದ ಮಾಜಿ ಸಿಎಂ ದಿಗ್ವಿಜಯ್‌ ಸಿಂಗ್‌ ಕಾಂಗ್ರೆಸ್‌ ಅಭ್ಯರ್ಥಿ ಯಾಗಲು ಸಮ್ಮತಿಸಿದ್ದು ಬಿಜೆಪಿಗೆ ಸವಾಲಾಗಿ ಪರಿಣಮಿಸಿದೆ. ಮೂಲಗಳ ಪ್ರಕಾರ ಬಿಜೆಪಿ ನಾಯಕ, ಮಾಜಿ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ರನ್ನು ಕಣಕ್ಕಿಳಿಸಲು ಚಿಂತನೆ ನಡೆಯುತ್ತಿದೆ. ಜತೆಗೆ ಬೇರೆ ಯಾರಾದರೂ, ಪ್ರಬಲ ಸ್ಪರ್ಧೆ ನೀಡುವ ನಾಯಕರು ಇದ್ದಾರೆಯೇ ಎಂಬ ಹುಡುಕಾಟ ಆರಂಭವಾಗಿದೆ.

Advertisement

ಮಧ್ಯಪ್ರದೇಶದ ಮುಖ್ಯಮಂತ್ರಿಯಾಗುವುದಕ್ಕಿಂತ ಮೊದಲು ಶಿವರಾಜ್‌ ಸಿಂಗ್‌ ಚೌಹಾಣ್‌ ವಿದಿಷಾ ಕ್ಷೇತ್ರದಿಂದ 15 ವರ್ಷ ಕಾಲ ಲೋಕಸಭೆ ಸದಸ್ಯರಾಗಿದ್ದರು. ಒಂದೊಮ್ಮೆ ದಿಗ್ವಿಜಯ ಸಿಂಗ್‌ ಮತ್ತು ಶಿವರಾಜ್‌ ನಡುವೆ ಹೋರಾಟ ಅಂತಿಮ ಎಂದಾದರೆ, ಈ ಬಾರಿಯ ಚುನಾವಣೆಯಲ್ಲಿ ಭೋಪಾಲ ಕ್ಷೇತ್ರ ಹೈಪ್ರೊಫೈಲ್‌ ಕ್ಷೇತ್ರಗಳಲ್ಲಿ ಒಂದಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next