Advertisement

ದಿಗಂತ್‌ ಖಾತೆಯಲ್ಲಿ ಹಣವಿಲ್ಲ…

02:55 PM Oct 30, 2020 | Suhan S |

ಮದುವೆಯ ಬಳಿಕ ನಟ ದಿಗಂತ್‌ ಮತ್ತುಐಂದ್ರಿತಾ ರೇ ಜೋಡಿಯಾಗಿ ಅಭಿನಯಿಸುತ್ತಿರುವ ಹೊಸ ಚಿತ್ರಕ್ಕೆ “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಎಂದು ಹೆಸರಿಡಲಾಗಿದೆ. ಇತ್ತೀಚೆಗೆ ನಟ ಉಪೇಂದ್ರ ಚಿತ್ರದ ಪೋಸ್ಟರ್‌ನ್ನು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

Advertisement

ಸಿಲ್ಕ್ ಮಂಜು ನಿರ್ಮಾಣದ ಈ ಚಿತ್ರಕ್ಕೆ ವಿನಾಯಕ ಕೋಡ್ಸರ ನಿರ್ದೇಶನ ಮಾಡುತ್ತಿದ್ದಾರೆ. ಉಳಿದಂತೆ ಚಿತ್ರದಲ್ಲಿ ರಂಜನಿ ರಾಘವನ್‌, ಮಂಜುನಾಥ ಹೆಗಡೆ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಸಾಗರ, ಸಿಗಂದೂರು, ಬೆಂಗಳೂರು ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಯಲಿದೆ.

 ನಿರ್ಮಾಪಕ ಕೆ.ಪಿ ಶ್ರೀಕಾಂತ್‌ ಬರ್ತ್‌ಡೇಗೆ ತಾರೆಯರ ವಿಶ್‌ :  

“ಟಗರು’ ಚಿತ್ರದ ಖ್ಯಾತಿಯ ನಿರ್ಮಾಪಕ ಕೆ.ಪಿ ಶ್ರೀಕಾಂತ್‌ ಬುಧವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ವೇಳೆ ಅಭಿಮಾನಿಗಳು ಮತ್ತು ಚಿತ್ರರಂಗದ ಅನೇಕ ಗಣ್ಯರು ಕೆ.ಪಿ ಶ್ರೀಕಾಂತ್‌ ಅವರಿಗೆ ಶುಭಕೋರಿದರು.

ಇನ್ನು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಕೆ.ಪಿ ಶ್ರೀಕಾಂತ್‌ ಅವರಿಗೆಕನ್ನಡ ಚಿತ್ರರಂಗದ ತಾರೆಯರಾದ ಶಿವರಾಜ ಕುಮಾರ್‌, ಕಿಚ್ಚ ಸುದೀಪ್‌, ಉಪೇಂದ್ರ, ದುನಿಯಾ ವಿಜಯ್‌, ನಿರ್ದೇಶಕರಾದ ಆರ್‌. ಚಂದ್ರು, ಸಂತೋಷ್‌ ಆನಂದ್‌ ರಾಮ್‌, ಬಹದ್ದೂರ್‌ ಚೇತನ್‌, ಬಹದ್ದೂರ್‌ ಚೇತನ್‌, ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್‌ ಕುಮಾರ್‌ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಸಾಮಾಜಿಕಜಾಲತಾಣಗಳ ಮೂಲಕ ಶುಭ ಕೋರಿದ್ದಾರೆ. ಇತ್ತೀಚೆಗೆ “ಟಗರು’ ಚಿತ್ರ ರೀ-ರಿಲೀಸ್‌ ಆಗಿದ್ದು, ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಸದ್ಯ ಕೆ.ಪಿ ಶ್ರೀಕಾಂತ್‌ ನಿರ್ಮಾಣದ ದುನಿಯಾ ವಿಜಯ್‌ ಅಭಿನಯದ “ಸಲಗ’ ಚಿತ್ರ ತೆರೆಗೆ ಬರುವ ತಯಾರಿಯಲ್ಲಿದೆ.­

Advertisement
Advertisement

Udayavani is now on Telegram. Click here to join our channel and stay updated with the latest news.

Next