Advertisement

ಎವರು ಇವರು! ಥ್ರಿಲ್ಲರ್‌ ಕಥೆಯಲ್ಲಿ ದಿಗಂತ್‌-ಹರಿಪ್ರಿಯಾ

01:27 PM Oct 23, 2020 | Suhan S |

ಚಿತ್ರರಂಗದಲ್ಲಿ ಚಟುವಟಿಕೆಗಳು ಗರಿಗೆದರುತ್ತಿವೆ. ಹೊಸ ಹೊಸ ಸಿನಿಮಾಗಳು ಸೆಟ್ಟೇರುತ್ತಿವೆ. ಈಗ ಈ ಸಾಲಿಗೆ ದಿಗಂತ್‌ ಹಾಗೂ ಹರಿಪ್ರಿಯಾ ಜೋಡಿಯ ಚಿತ್ರವೂ ಸೇರುತ್ತದೆ. ಹೌದು, ತೆಲುಗಿನಲ್ಲಿ ಹಿಟ್‌ ಆದ “ಎವರು’ ಚಿತ್ರ ಈಗ ಕನ್ನಡದಲ್ಲಿ ರೀಮೇಕ್‌ ಆಗುತ್ತಿದ್ದು, ದಿಗಂತ್‌ ಹಾಗೂ ಹರಿಪ್ರಿಯಾ ನಾಯಕ-ನಾಯಕಿಯಾಗಿ ನಟಿಸುತ್ತಿದ್ದಾರೆ.

Advertisement

ಚಿತ್ರದ ಪ್ರಮುಖ ಪಾತ್ರದಲ್ಲಿ ವಸಿಷ್ಠ ಸಿಂಹ ನಟಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ. ಈಗಾಗಲೇ ತೆಲುಗಿನಲ್ಲಿ ಎರಡು ಸಿನಿಮಾಗಳನ್ನು ನಿರ್ದೇಶಿಸಿರುವ ಅಶೋಕ್‌ ತೇಜ್‌ ಈ ಚಿತ್ರದ ನಿರ್ದೇಶಕರು. ಹೈದರಾಬಾದ್‌ ಮೂಲದ ರಾಜೇಶ್‌ ಅಗರವಾಲ್‌ ಹಾಗೂ ಡಿ.ಜಯಪ್ರಕಾಶ್‌ ರಾವ್‌ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ತೆಲುಗಿನ ಹಿಟ್‌ ಆಗಿದ್ದ “ಎವರು’ ಚಿತ್ರ ಸ್ಪ್ಯಾನಿಶ್‌ನಲ್ಲಿ ಪ್ರಕಟವಾಗಿದ್ದ ಕಾದಂಬರಿಯೊಂದರ ಪ್ರೇರಣೆಯಾಗಿತ್ತು. ತಂದೆಯನ್ನು ಕೊಂದ ಕೊಲೆಗಾರನನ್ನು ರೋಗಿ ಮಗನೇ ಪತ್ತೆ ಹಚ್ಚುವ ಅಂಶದೊಂದಿಗೆ ಸಾಗುವ ಈ ಸಿನಿಮಾ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಕನ್ನಡದಲ್ಲೂ ಅದ್ಧೂರಿಯಾಗಿ ಮಾಡಲು ಚಿತ್ರತಂಡ ಮುಂದಾಗಿದೆ.

ಈ ಚಿತ್ರದ ಬಗ್ಗೆ ದಿಗಂತ್‌ ಕೂಡಾ ಎಕ್ಸೆ„ಟ್‌ ಆಗಿದ್ದಾರೆ. ಚಿತ್ರದಲ್ಲಿ ಅವರ ಪಾತ್ರ ಎರಡು ಶೇಡ್‌ಗಳಲ್ಲಿ ಸಾಗುತ್ತದೆಯಂತೆ. ಕನ್ನಡಕ್ಕೆ ಇದು ಹೊಸ ಬಗೆಯ ಚಿತ್ರವಾಗಲಿದೆ ಎಂಬ ವಿಶ್ವಾಸ ದಿಗಂತ್‌ ಅವರದು. ನಟಿ ಹರಿಪ್ರಿಯಾ ಕೂಡಾ ಸವಾಲಿನ ಪಾತ್ರ ಸಿಕ್ಕಿರುವುದರಿಂದ ಖುಷಿಯಾಗಿದ್ದಾರೆ. ಚಿತ್ರಕ್ಕೆ ಶ್ರೀಚರಣ್‌ ಸಂಗೀತ, ಯೋಗಿ ಛಾಯಾಗ್ರಹಣ, ಸುಬ್ರಮಣ್ಯ ಹಾಗೂ ಸುಕೃತ್‌ ಸಂಭಾಷಣೆ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next