Advertisement

“ಬಿಹಾರ’ಹೇಳಿಕೆ ಹಿಂಪಡೆದ ಗೋಯಲ್‌

07:32 PM Dec 22, 2022 | Team Udayavani |

ನವದೆಹಲಿ: ಬಿಹಾರದ ಕುರಿತು ತಮ್ಮ ಹೇಳಿಕೆಯನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಶ್‌ ಗೋಯಲ್‌ ಗುರುವಾರ ಹಿಂಪಡೆದಿದ್ದಾರೆ.

Advertisement

ರಾಜ್ಯಸಭೆಯ ಕಲಾಪ ವೇಳೆ ಮಂಗಳವಾರ ವೆಚ್ಚ ವಿಧೇಯಕದ ಕುರಿತು ಆರ್‌ಜೆಡಿ ನಾಯಕ ಮನೋಜ್‌ ಝಾ ಮಾತನಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಗೋಯಲ್‌, “ಇವರು ತಾವು ಅಂದುಕೊಂಡಂತೆ ನಡೆದರೆ ದೇಶವನ್ನು ಬಿಹಾರವಾಗಿ ಬದಲಿಸುತ್ತಾರೆ,’ ಎಂದು ಹೇಳಿದ್ದರು.

ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಝಾ, “ಬಿಹಾರಕ್ಕೆ ಅಪಮಾನ ಮಾಡಿದರೆ ಇಡೀ ದೇಶಕ್ಕೆ ಅಪಮಾನ ಮಾಡಿದ್ದಂತೆ, ಗೋಯಲ್‌ ಅವರು ಕ್ಷಮೆಯಾಚಿಸಬೇಕು,’ ಎಂದು ಆಗ್ರಹಿಸಿದ್ದರು.

ಇದಕ್ಕೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಧ್ವನಿಗೂಡಿಸಿದ್ದರು. ಗುರುವಾರ ಗೋಯಲ್‌, “ಬಿಹಾರದ ಜನರನ್ನು ಅವಮಾನಿಸುವುದು ನನ್ನ ಉದ್ದೇಶ ಆಗಿರಲಿಲ್ಲ,’ ಎಂದು ಸ್ಪಷ್ಟನೆ ನೀಡಿ ಹೇಳಿಕೆಯನ್ನು ಹಿಂಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next