Advertisement

ಮಾನವ ಹಕ್ಕುಗಳ ಆಯೋಗಕ್ಕೆ ಡಿ.ಎಚ್‌.ವಘೇಲಾ ಅಧ್ಯಕ್ಷ

09:17 AM Jan 03, 2018 | |

ಬೆಂಗಳೂರು: ಐದೂವರೆ ವರ್ಷದಿಂದ ಖಾಲಿ ಇದ್ದ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ಎಚ್‌.ವಘೇಲಾ ಅವರನ್ನು ನೇಮಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. 

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನ ಸೌಧದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಸಿದ್ದರಾಮಯ್ಯ ಅವರು, ಮಾನವ ಹಕ್ಕುಗಳ ಆಯೋಗಕ್ಕೆ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಘೇಲಾ ಅವರನ್ನು ನೇಮಿಸಲು ನಿರ್ಧರಿಸಲಾಗಿದೆ ಎಂದರು. ಮಾನವ ಹಕ್ಕುಗಳ ಆಯೋಗಕ್ಕೆ ಇಬ್ಬರು ಸದಸ್ಯರನ್ನು ನೇಮಿಸಬೇಕಿದ್ದು ಹಲವರ ಹೆಸರು ಚರ್ಚಿಸಲಾಗಿದೆ ಎಂದು ತಿಳಿಸಿದರು. ನಿವೃತ್ತ ಡಿಜಿಪಿ ರೂಪ್‌ಕುಮಾರ್‌ ದತ್ತ ಅವರ
ಹೆಸರು ಪರಿಶೀಲನೆಯಲ್ಲಿದೆ ಎಂದು ಹೇಳಲಾಗಿದೆ.

ನ್ಯಾ.ಎಸ್‌.ಆರ್‌.ನಾಯಕ್‌ ಅವರ ನಂತರ ಮಾನವ ಹಕ್ಕುಗಳ ಆಯೋಗಕ್ಕೆ ಖಾಯಂ ಅಧ್ಯಕ್ಷರ ನೇಮಕಾತಿಯಾಗಿರಲಿಲ್ಲ. ಆದರೆ, ನಿವೃತ್ತ ಐಎಎಸ್‌ ಅಧಿಕಾರಿ ಮೀರಾ ಸಕ್ಸೇನಾ ಅವರು ಹಂಗಾಮಿ ಅಧ್ಯಕ್ಷರಾಗಿದ್ದರು. ನವೆಂಬರ್‌ನಲ್ಲಿ ಮೀರಾ ಸಕ್ಸೇನಾ ಹಾಗೂ ಸದಸ್ಯ ಸಿ.ಜಿ.ಹುನಗುಂದ್‌ ಅವರ ಅವಧಿ ಮುಗಿದಿತ್ತು. ಡಿ.ಎಚ್‌.ವಘೇಲಾ ರಾಜ್ಯ ಹೈಕೋರ್ಟ್‌ ಮುಖ್ಯ ನ್ಯಾಯ ಮೂರ್ತಿಯಾಗಿ ಕಾರ್ಯನಿರ್ವಹಿಸಿ 2015ರಲ್ಲಿ ನಿವೃತ್ತಿಯಾ ಗಿದ್ದರು. ಗುಜರಾತ್‌ ಮೂಲದ ವಘೇಲಾ ಅವರ ಹೆಸರು ಮಾನವ ಹಕ್ಕುಗಳ ಆಯೋಗ ಅಧ್ಯಕ್ಷ ಸ್ಥಾನಕ್ಕೆ ಒಂದು ವರ್ಷ ದಿಂದ ಕೇಳಿ ಬಂದಿತ್ತು. 

ನಾಲ್ವರು ಆಯುಕ್ತರು 
ಖಾಲಿ ಇರುವ ರಾಜ್ಯ ಮಾಹಿತಿ ಆಯುಕ್ತರ ಸ್ಥಾನ ಭರ್ತಿ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ. ಸುಧಾಮದಾಸ್‌, ಲಿಂಗರಾಜು, ಎಸ್‌.ಎಲ್‌. ಪಾಟೀಲ್‌ ಹಾಗೂ ಕುಮಾರಸ್ವಾಮಿ ಎಂಬುವರ ಹೆಸರು ಅಂತಿಮಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next