Advertisement

ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸುತ್ತಿರಲಿಲ್ಲ ಧೋನಿ !

08:52 PM Apr 08, 2020 | keerthan |

ರಾಂಚಿ: ಭಾರತದ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮಾನವೀಯ ಮೌಲ್ಯಗಳುಳ್ಳ ಕ್ರಿಕೆಟಿಗರಾಗಿದ್ದಾರೆ ಎಂದು ಅಂಕಣವೊಂದರಲ್ಲಿ ಕ್ರಿಕೆಟ್‌ ದಂತಕಥೆ ಸುನಿಲ್‌ ಗಾವಸ್ಕರ್‌ ಬರೆದುಕೊಂಡಿದ್ದಾರೆ.

Advertisement

ಇದನ್ನು ಗಾವಸ್ಕರ್‌ ಉದಾಹರಣೆ ಸಹಿತ ವಿವರಿಸಿದ್ದು ಹೀಗೆ: “ಸಾಮಾನ್ಯವಾಗಿ ಕ್ರಿಕೆಟ್‌ ಆಟಗಾರರು ವಿಮಾನದಲ್ಲಿ ಪ್ರಯಾಣಿಸುವಾಗ ಐಷಾರಾಮಿ ಸೀಟು ಬ್ಯುಸಿನೆಸ್‌ ದರ್ಜೆಯಲ್ಲಿ ಪ್ರಯಾಣಿಸುತ್ತಾರೆ, ಆದರೆ ಧೋನಿ ಅದನ್ನೆಲ್ಲ ಬಿಟ್ಟು ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣ ಮಾಡಲು ಹೆಚ್ಚಿನ ಆದ್ಯತೆ ನೀಡುತ್ತಿದ್ದರು.

ದೇಶೀಯ ಕ್ರಿಕೆಟ್‌ ಕೂಟಗಳು ನಡೆದಾಗ ಒಂದು ಕಡೆಯಿಂದ ಮತ್ತೂಂದು ಕಡೆಗೆ ವಿಮಾನದಲ್ಲಿ ತೆರಳಿದಾಗ ವಿಶೇಷ ಚಾರ್ಟೆಡ್‌ ವಿಮಾನ ವ್ಯವಸ್ಥೆ ಮಾಡಲಾಗುತ್ತಿತ್ತು.ಇದರಲ್ಲೇ ಎರಡೂ ತಂಡದ ಆಟಗಾರರು ಪ್ರಯಾಣಿಸುತ್ತಿದ್ದರು, ಈ ವೇಳೆ ಟೀವಿ ಸೌಂಡ್ಸ್‌ ಎಂಜಿನಿಯರ್, ಛಾಯಾಗ್ರಾಹಕರು ಕೂಡ ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು, ಧೋನಿ ಇವರೊಂದಿಗೆ ಹರಟುತ್ತಾ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದರು, ಇದು ನನಗೆ ಅಚ್ಚರಿ ತಂದಿತ್ತು, ನಾಯಕನಾಗಿದ್ದಾಗಲೂ ಧೋನಿ ಇದೇ ರೀತಿ ಮಾಡುತ್ತಿದ್ದರು’ ಎಂದು ಗಾವಸ್ಕರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next