Advertisement

ಮೆಂಟರ್‌ ಧೋನಿ-ನಾಯಕ ಕೊಹ್ಲಿ!

12:02 AM Oct 23, 2021 | Team Udayavani |

ಟಿ20 ವಿಶ್ವಕಪ್‌ ಇತಿಹಾಸದ ಮೊದಲ ಕೂಟ 2007ರಲ್ಲಿ ದ.ಆಫ್ರಿಕಾದಲ್ಲಿ ನಡೆಯಿತು. ಆಗ ಭಾರತ ತಂಡದ ನಾಯಕರಾಗಿದ್ದು ಎಂ.ಎಸ್‌.ಧೋನಿ.

Advertisement

ಧೋನಿ ಆಗಿನ್ನೂ ನಾಯಕರಾಗಿದ್ದಷ್ಟೇ. ಕೊಹ್ಲಿಯಂತೂ ಭಾರತ ತಂಡವನ್ನೇ ಪ್ರವೇಶಿಸಿರಲಿಲ್ಲ. ಅಂತಹ ಹೊತ್ತಿನಲ್ಲಿ ಭಾರತ ವಿಶ್ವಕಪ್ಪನ್ನೇ ಗೆದ್ದುಬಿಟ್ಟಿತು. ಇದೀಗ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿ ಬಹಳ ಕಾಲವೇ ಸಂದಿದೆ. ಟಿ20 ವಿಶ್ವಕಪ್‌ ನಿಗದಿಯಂತೆ ಕಳೆದ ವರ್ಷವೇ ನಡೆದಿದ್ದರೆ ಧೋನಿ ಅದನ್ನು ಆಡಿಯೇ ನಿವೃತ್ತರಾಗುವ ಸಾಧ್ಯತೆಯೊಂದಿತ್ತು. ಕೊರೊನಾ ಕಾರಣ ಟಿ20 ವಿಶ್ವಕಪ್‌ ಈ ವರ್ಷಕ್ಕೆ ಮುಂದೂ ಡಿಕೆಯಾಗಿದ್ದರಿಂದ ಧೋನಿ ದಿಢೀರ್‌ ವಿದಾಯ ಘೋಷಿಸಿದರು. ಅಷ್ಟಾದರೂ ಧೋನಿಗೂ ಭಾರತ ತಂಡಕ್ಕೂ ಇರುವ ನಂಟು ಮುಗಿದಿಲ್ಲ.

ಟಿ20 ವಿಶ್ವಕಪ್‌ ಮುಗಿದ ಮೇಲೆ ತಾನು ಭಾರತ ಟಿ20 ತಂಡದ ನಾಯಕರಾಗಿ ರುವುದಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ. ಇಂತಹ ಹೊತ್ತಿನಲ್ಲಿ ಧೋನಿ ಭಾರತ ತಂಡದ ಮೆಂಟರ್‌ ಆಗಿ ಮರಳಿದ್ದಾರೆ! ಒಂದು ಕಡೆ ಕೊಹ್ಲಿಗಿದು ಟಿ20 ನಾಯಕ ನಾಗಿ ಕೊನೆಯ ವಿಶ್ವಕಪ್‌. ಹಾಗೆಯೇ ಧೋನಿಗೆ ಮೆಂಟರ್‌ ಆಗಿ ಮೊದಲ ವಿಶ್ವಕಪ್‌! ಒಬ್ಟಾತ ಸಾರ್ವ ಕಾಲಿಕ ಶ್ರೇಷ್ಠ ನಾಯಕ ರಲ್ಲೊಬ್ಬ. ಇನ್ನೊಬ್ಬ ಸಾರ್ವ ಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌. ವಿಚಿತ್ರವೆಂದರೆ ಧೋನಿ ಬ್ಯಾಟ್ಸ್‌ ಮನ್‌ ಆಗಿ ಬಹಳ ಮೆರೆಯಲಿಲ್ಲ, ಕೊಹ್ಲಿ ನಾಯಕನಾಗಿ ವಿಶ್ವಮಟ್ಟದ ಕೂಟದಲ್ಲಿ ಮೆರೆದಿಲ್ಲ. ಹೀಗೆ ನೋಡಿದರೆ ಧೋನಿ ಕಳಪೆ ಆಟಗಾರನಲ್ಲ, ಕೊಹ್ಲಿ ಕಳಪೆ ನಾಯಕನೂ ಅಲ್ಲ. ಇಬ್ಬರೂ ಶ್ರೇಷ್ಠರೇ ಆದರೂ, ನಾಯಕನಾಗಿ ಧೋನಿಯನ್ನು, ಬ್ಯಾಟ್ಸ್‌ಮನ್‌ ಆಗಿ ಕೊಹ್ಲಿಯನ್ನು ತೂಗಿದರೆ; ಇಬ್ಬರೂ ಈ ಪಾತ್ರಗಳಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದ್ದಾರೆ. ಉಲ್ಟಾ ಪಾತ್ರಗಳಲ್ಲಿ ನಿರೀಕ್ಷೆಯನ್ನು ಸ್ವಲ್ಪ ಮಾತ್ರ ಈಡೇರಿಸಿದ್ದಾರೆ.

ಈ ಎರಡು ದೈತ್ಯಪ್ರತಿಭೆಗಳು ಮತ್ತೊಮ್ಮೆ ಒಂದಾಗಿವೆ. ಇದರಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಪಾತ್ರ ಬಹಳ ದೊಡ್ಡದು. ಧೋನಿಯನ್ನು ಈ ಸ್ಥಾನಕ್ಕೆ ಒಪ್ಪಿಸಿದ್ದೇ ಅವರು ಎಂದು ಹೇಳಲಾಗುತ್ತಿದೆ. ಕೊಹ್ಲಿ-ಧೋನಿ ಇಬ್ಬರೂ ಸೇರಿಕೊಂಡು ಭಾರತವನ್ನು ಮತ್ತೆ ವಿಶ್ವಪಟ್ಟಕ್ಕೇರಿಸಬೇಕೆನ್ನುವ ಗಂಗೂಲಿ ಇಚ್ಛೆ ಈಡೇರುವುದು ಕಷ್ಟವೇನಲ್ಲ.

ಇದನ್ನೂ ಓದಿ:ಟಿ20 ವಿಶ್ವಕಪ್‌: ಸೂಪರ್‌-12 ಹಂತಕ್ಕೆ ನಮೀಬಿಯಾ

Advertisement

ನಾಯಕನಾಗಿ ಕೊಹ್ಲಿಗೊಂದು ದೊಡ್ಡ ಕಳಂಕವಿದೆ. ಅವರು ದ್ವಿಪಕ್ಷೀಯ ಸರಣಿಗಳನ್ನು ಅದ್ಭುತ ದಾಖಲೆಯಲ್ಲೇ ಗೆದ್ದಿದ್ದಾರೆ. ವಿಶ್ವಕೂಟಗಳಲ್ಲಿ ಮಾತ್ರ ಸೆಮಿಫೈನಲ್‌, ಫೈನಲ್‌ಗ‌ಳಲ್ಲಿ ಎಡವಿದ್ದಾರೆ. ಅದೇ ಧೋನಿ ಟಿ20, ಏಕದಿನಗಳಲ್ಲಿ ವಿಶ್ವಕಪ್‌ ಗೆದ್ದು, ಚಾಂಪಿಯನ್ಸ್‌ ಟ್ರೋಫಿಯ ಮೇಲೂ ಹಕ್ಕು ಚಲಾಯಿಸಿದ್ದಾರೆ. ಧೋನಿ ತಮ್ಮ ಚಾಕಚಕ್ಯತೆಯಿಂದ ಕೊಹ್ಲಿ ಪಡೆಯಿಂದಲೂ ಅಂತಹದ್ದೊಂದು ಸಾಧನೆ ಮಾಡಿಸ ಬೇಕೆನ್ನುವುದು ಬಿಸಿಸಿಐ ಬಯಕೆ. ಕೊಹ್ಲಿಗೂ ದೊಡ್ಡದೊಡ್ಡ ಕಪ್‌ಗ್ಳಲ್ಲಿ ಸತತವಾಗಿ ಕೈಚೆಲ್ಲಿದ ನೋವಿದೆ. ಅದನ್ನು ಹಲವರು ಟೀಕೆಗೆ ವಿಷಯ ವನ್ನಾಗಿ ಮಾಡಿಕೊಂಡಿದ್ದಾರೆ. ಮತ್ತೊಂದು ಕಡೆಯಿಂದ ಧೋನಿಗೆ ತನಗೆ ಟಿ20 ವಿಶ್ವಕಪ್‌ ಆಡಲಾಗದಿದ್ದರೂ, ತೆರೆಮರೆಯಲ್ಲಾದರೂ ನಿಲ್ಲುವ ಅವಕಾಶ ಸಿಕ್ಕ ಸಂತೋಷವಿದೆ. ಈ ಇಬ್ಬರೂ ಒಂದಾಗಿ, ಸಮನ್ವಯತೆ ತೋರಿದರೆ ಭಾರತಕ್ಕೆ ಕಪ್‌ ಗೆಲ್ಲುವುದು ಕಷ್ಟವೇನಲ್ಲ, ಒಂದೇ ಮಾತಿನಲ್ಲಿ ಹೇಳುವುದಾದರೆ ಹೂವೆತ್ತಿದಷ್ಟೇ ಸರಳ.

Advertisement

Udayavani is now on Telegram. Click here to join our channel and stay updated with the latest news.

Next