Advertisement

ತ.ನಾ. ರೈತ ಧ್ವನಿ ಬಲವರ್ಧನೆಗೆ ಐಪಿಎಲ್‌ ಬಹಿಷ್ಕರಿಸಿ: ದಿನಕರನ್‌

04:14 PM Apr 06, 2018 | Team Udayavani |

ಚೆನ್ನೈ : ಕಾವೇರಿ ಜಲ ನಿರ್ವಹಣಾ ಮಂಡಳಿಯನ್ನು ಸ್ಥಾಪಿಸಬೇಕೆಂಬ ಸಂತ್ರಸ್ತ ರೈತರ ಧ್ವನಿಯನ್ನು ಬಲಪಡಿಸುವ ಸಲುವಾಗಿ ರಾಜ್ಯ ಕ್ರಿಕೆಟ್‌ ಅಭಿಮಾನಿಗಳು ಇಲ್ಲಿ ನಡೆಯುವ ಐಪಿಎಲ್‌ ಪಂದ್ಯಗಳನ್ನು ಬಹಿಷ್ಕರಿಸಬೇಕು  ಎಂದು ಅಮ್ಮ ಮಕ್ಕಳ್‌ ಮುನ್ನೇತ್ರ ಕಳಗಂ ನಾಯಕ ಟಿಟಿವಿ ದಿನಕರನ್‌ ಒತ್ತಾಯಿಸಿದ್ದಾರೆ.

Advertisement

ಕಾವೇರಿ ನೀರಿನ ಹಕ್ಕನ್ನು ಮತ್ತೆ ಪಡೆಯುವ ರೈತರ ಧ್ವನಿಯನ್ನು ಬಲಪಡಿಸಲು ರಾಜ್ಯ ಕ್ರಿಕೆಟ್‌ ಅಭಿಮಾನಿಗಳು ಐಪಿಎಲ್‌ ಪಂದ್ಯಗಳನ್ನು ಬಹಿಷ್ಕರಿಸಬೇಕು ಎಂದು ನಾನು ವಿನಂತಿಸುತ್ತೇನೆ ಎಂಬುದಾಗಿ ದಿನಕರನ್‌ ಟ್ವೀಟ್‌ ಮಾಡಿದ್ದಾರೆ.

ಇದೇ ಎಪ್ರಿಲ್‌ 10ರಿಂದ ಮೇ 20ರ ತನಕ ಇಲ್ಲಿ ಒಟ್ಟು 7 ಐಪಿಎಲ್‌ ಪಂದ್ಯಗಳು ನಡೆಯಲಿವೆ. 

Advertisement

Udayavani is now on Telegram. Click here to join our channel and stay updated with the latest news.

Next