Advertisement

ಕೋವಿಡ್‌ ಪ್ರಯೋಗಾಲಯಕ್ಕೆ ಅಗತ್ಯ ಉಪಕರಣಗಳ ರವಾನೆ

05:21 PM Apr 13, 2020 | Team Udayavani |

ಧಾರವಾಡ: ಕವಿವಿ ಸೂಕ್ಷ್ಮಾಣು ಜೀವಶಾಸ್ತ್ರ ಹಾಗೂ ಅಪರಾಧ ಶಾಸ್ತ್ರ ವಿಭಾಗ ಕೇಂದ್ರದಿಂದ ವಶಪಡಿಸಿಕೊಂಡ ಕೋವಿಡ್‌ ಪ್ರಯೋಗಾಲಯಕ್ಕೆ ಅಗತ್ಯವಿರುವ ಉಪಕರಣಗಳನ್ನು ಜಿಲ್ಲಾಡಳಿತ ಕಿಮ್ಸ್‌ಗೆ ರವಾನಿಸಿದೆ.

Advertisement

ಕೋವಿಡ್‌ ಪ್ರಯೋಗಾಲಯಕ್ಕೆ ಬೇಕಿರುವ ಉಪಕರಣಗಳನ್ನು ಒದಗಿಸುವಂತೆ ಜಿಲ್ಲಾಡಳಿತ ಕವಿವಿಯ ಈ ಎರಡೂ ವಿಭಾಗಕ್ಕೂ ತಿಳಿಸಿತ್ತು. ಆದರೆ ಇದಕ್ಕೆ ಸೂಕ್ತ ಸ್ಪಂದನೆ ಸಿಗದ ಕಾರಣ ಡಿಸಿ ದೀಪಾ ಚೋಳನ್‌ ಅವರ ಸೂಚನೆ ಮೇರೆಗೆ ಎಸಿ ಹಾಗೂ ತಹಶೀಲ್ದಾರರು ಕೇಂದ್ರಕ್ಕೆ ಭೇಟಿ ನೀಡಿ ಪ್ರಯೋಗಾಲಯಕ್ಕೆ ಬೇಕಿರುವ ಉಪಕರಣಗಳನ್ನು ವಶಕ್ಕೆ ಪಡೆದರು.

ಇದಕ್ಕೂ ಮುನ್ನ ಈ ವಿಭಾಗಗಳಿಗೆ ಹಾಕಲಾಗಿದ್ದ ಬೀಗ ಒಡೆದ ಬಳಿಕ ಅಲ್ಲಿದ್ದ ಆರ್‌ಟಿಪಿಸಿಆರ್‌, ಐಸ್‌ ಪ್ಯಾಕಿಂಗ್‌ ಯಂತ್ರಗಳು ಹಾಗೂ ಬಿಎಸ್‌ಎಲ್‌ಎ 2 ಕ್ಯಾನಿನೆಟ್‌ಗಳನ್ನು ಕೇಂದ್ರದಿಂದ ತಮ್ಮ ವಶಕ್ಕೆ ಪಡೆದು ವಾಹನದ ಮೂಲಕ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಯಿತು. ಕೋವಿಡ್‌ ಪ್ರಯೋಗಾಲಯಕ್ಕೆ ಬೇಕಾದ ಉಪಕರಣಗಳನ್ನು ನೀಡುವಂತೆ ತಿಳಿಸಲಾಗಿತ್ತು. ಆದರೆ ಇದಕ್ಕೆ ಸರಿಯಾದ ಸ್ಪಂದನೆ ಸಿಗದ ಕಾರಣ ಡಿಸಿ ಸೂಚನೆ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಉಪಕರಣಗಳನ್ನು ವಶಕ್ಕೆ ಪಡೆದು ಕೋವಿಡ್‌ ಪ್ರಯೋಗಾಲಯಕ್ಕೆ ಹಸ್ತಾಂತರ ಮಾಡಿದ್ದೇವೆಂದು ಧಾರವಾಡ ಉಪವಿಭಾಗಾಧಿಕಾರಿ ಮಹಮ್ಮದ ಜುಬೇರ ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next