Advertisement

Dharwad: ಮದುವೆ ಸಮಾರಂಭದ ಚಿನ್ನಾಭರಣ ಕಳ್ಳತನ ಪ್ರಕರಣ ಬೇಧಿಸಿದ ಪೊಲೀಸರು

01:13 PM Mar 25, 2024 | Team Udayavani |

ಧಾರವಾಡ: ಮಾ.6ರಂದು ನಗರದ ಪ್ರತಿಷ್ಠಿತ ಹೋಟೆಲ್ ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಚಿನ್ನಾಭರಣ ದೋಚಿದ್ದ ಕಳ್ಳರನ್ನು ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಹುಬ್ಬಳ್ಳಿ-ಧಾರವಾಡ ಪೋಲಿಸ್ ಆಯುಕ್ತ ರೇಣುಕಾ ಸುಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಬಂಧಿತ ಬಾಲಕ ಅಪ್ರಾಪ್ತ. ಇನ್ನೂ ಮೂವರು ಆರೋಪಿಗಳನ್ನು ಗುರುತಿಸಿದ್ದು, ಶೀಘ್ರದಲ್ಲಿ ಬಂಧಿಸಲಾಗುವುದು. ಬಂಧಿತ ಬಾಲಕನಿಂದ 964 ಗ್ರಾಂ ತೂಕದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಮಧ್ಯಪ್ರದೇಶ ರಾಜ್ಯದ ರಾಜಗಡ ಜಿಲ್ಲೆ ಪಚೋರೆ ತಾಲೂಕಿನಲ್ಲಿ ಮಾ. 22ರಂದು ಬಾಲಕನ ಬಂಧನ ಮಾಡಿದ್ದಾಗಿ ಹೇಳಿದರು.

ಪಚೋರೆಯಲ್ಲಿನ ತಂಡಕ್ಕೆ ಮದುವೆ ಮನೆಗಳೇ ಟಾರ್ಗೆಟ್. ಆಯಾ ಜಿಲ್ಲೆಯ ಬಾಲಕರನ್ನೇ ಇಂತಹ ಕೃತ್ಯಕ್ಕೆ ಬಳಸುತ್ತಾರೆ. ದೇಶಾದ್ಯಂತ ದೊಡ್ಡ ದೊಡ್ಡ ಕೃತ್ಯಗಳಲ್ಲಿ ಭಾಗಿಯಾಗುತ್ತಾರೆ ಎಂದರು.

ಈ ಪ್ರಕರಣ ಕುರಿತು ಅರುಣಕುಮಾರ ಗಿರೊಯಾಪುರ ಎಂಬುವರಿಂದ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next