Advertisement

ಧಾರವಾಡ : ಅನ್ ಲಾಕ್ ಮಾಡುವಂತೆ ಜಗದೀಶ್ ಶೆಟ್ಟರ್ ಗೆ ಮನವಿ

01:53 PM Jun 20, 2021 | Team Udayavani |

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ದರ ಶೇ.5ಕ್ಕಿಂತ ಕಡಿಮೆ ಇದ್ದರೂ ಅನ್ ಲಾಕ್ ಘೋಷಣೆ ಆಗದಿರುವ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ತಿಳಿಸಿದ್ದಾರೆ.

Advertisement

ಸೋಮವಾರದಿಂದ ಜಿಲ್ಲೆಯಲ್ಲಿ ಅನ್ ಲಾಕ್ ಆಗದಿರುವ ಬಗ್ಗೆ ವಿವಿಧ ವರ್ತಕರು , ರವಿವಾರ ಸಚಿವ ಶೆಟ್ಟರ ಅವರ ನಿವಾಸಕ್ಕೆ ತೆರಳಿ , ಅನ್ ಲಾಕ್ ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಸರಕಾರ ಜಿಲ್ಲೆಯ ಹತ್ತು ದಿನಗಳ ಕೋವಿಡ್ ಪಾಸಿಟಿವ್ ದರ ಪಡೆದಿದ್ದರಿಂದ ಅನ್ ಲಾಕ್ ಘೋಷಣೆ ಆಗದಿರಲು ಕಾರಣ. ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ ಜತೆ ಮಾತನಾಡಿದ್ದೇನೆ. ಸಿಎಂ ಅವರೊಂದಿಗೂ ಮಾತನಾಡಿ ವಾಸ್ತವ ಸ್ಥಿತಿ ತಿಳಿಸುವೆ ಎಂದು ಸಚಿವರು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next