Advertisement

22ರಿಂದ ಧಾರವಾಡ ಕೃಷಿ ಮೇಳ 

05:27 PM Sep 13, 2018 | Team Udayavani |

ಧಾರವಾಡ: ಕೃಷಿ ವಿಶ್ವವಿದ್ಯಾಲಯವು ಸೆ.22ರಿಂದ 25ರ ವರೆಗೆ ಕೃಷಿ ಮೇಳ ಹಮ್ಮಿಕೊಳ್ಳಲಾಗಿದ್ದು, ಪ್ರಸಕ್ತ ಕೃಷಿ ಮೇಳದಲ್ಲಿ ವಸ್ತು ಪ್ರದರ್ಶನಕ್ಕೆ ಸುಮಾರು 800ಕ್ಕೂ ಹೆಚ್ಚು ಮಳಿಗೆಗಳನ್ನು ನಿರ್ಮಿಸಲಾಗಿದೆ. ಈ ಮೇಳಕ್ಕೆ ಆಗಮಿಸುವ ರೈತರಿಗೆ ತಾಂತ್ರಿಕತೆಗಳನ್ನು ಮನದಟ್ಟಾಗಿ ತಿಳಿಸಲು ಸಂಶೋಧನಾ ಕ್ಷೇತ್ರಗಳನ್ನು ವಿಜ್ಞಾನಿಗಳು ಸಿದ್ಧಪಡಿಸಿದ್ದಾರೆ. ಅದೇ ರೀತಿ ಪ್ರಸಕ್ತ ವರ್ಷದ ಕೃಷಿ ಮೇಳದ ಘೋಷವಾಕ್ಯವಾದ ಸಿರಿಧಾನ್ಯ ಬಳಸಿ-ಆರೋಗ್ಯ ಉಳಿಸಿ ಎಂಬ ಶೀರ್ಷಿಕೆಯಡಿ ಆಯೋಜಿಸಿದ್ದು, ವಿಶೇಷವಾಗಿ ಸಿರಿಧಾನ್ಯಗಳಿಗೆ ಹೆಚ್ಚು ಒತ್ತು ಕೊಡಲಾಗಿದೆ. ಸಿರಿಧಾನ್ಯಗಳ ಬೀಜಗಳ ಮಾರಾಟದ ವ್ಯವಸ್ಥೆ, ತಾಂತ್ರಿಕ ವರ್ಗಾವಣೆ ಹಾಗೂ ಪ್ರಾತ್ಯಕ್ಷಿಕೆಗಳನ್ನು ಕೂಡ ಹಮ್ಮಿಕೊಳ್ಳಲಾಗಿದೆ. 

Advertisement

ಅದರಂತೆ, ಕೃಷಿ ಮೇಳದ ಮುಖ್ಯ ಆಕರ್ಷಣಿಯ ಭಾಗವಾದ ಮತ್ಸ್ಯ ಮೇಳವನ್ನೂ ಕೂಡ ಬೃಹತ್‌ ಪ್ರಮಾಣದಲ್ಲಿ ಏರ್ಪಡಿಸಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಒಣಬೇಸಾಯ ತಾಂತ್ರಿಕತೆಗಳಿಗೆ ಹೆಚ್ಚು ಒತ್ತುಕೊಟ್ಟು ಕರ್ನಾಟಕ ಸರಕಾರದ ಕೃಷಿಭಾಗ್ಯ ಯೋಜನೆಯ ಅಂಶಗಳಾದ ಕೃಷಿ ಹೊಂಡ, ಸೂಕ್ಷ್ಮನೀರಾವರಿ, ಸಮಗ್ರ ಕೃಷಿ ಪದ್ಧತಿ, ಹಸಿರು ಮನೆಯಲ್ಲಿ ಹೂ ಮತ್ತು ತರಕಾರಿ ಬೆಳೆ ಬೆಳೆಯುವ ಕುರಿತು ರೈತರಿಗೆ ಮನವರಿಕೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಜೈವಿಕ ಇಂಧನದ ಉತ್ಪಾದನೆ, ಸಂಸ್ಕರಣೆ ಮತ್ತು ಅದನ್ನು ವಾಹನಗಳಿಗೆ ಬಳಕೆ ಬಗ್ಗೆ ಮಾಹಿತಿಯ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next