Advertisement

ಟ್ವಿಟರ್‌ ಕುಂದುಕೊರತೆ ಅಧಿಕಾರಿ ಧರ್ಮೇಂದ್ರ ಚತುರ್‌ ರಾಜೀನಾಮೆ

09:39 PM Jun 27, 2021 | Team Udayavani |

ನವದೆಹಲಿ: ದಿಢೀರ್‌ ಬೆಳವಣಿಗೆಯೊಂದರಲ್ಲಿ ಟ್ವಿಟರ್‌ ಸಂಸ್ಥೆಯಲ್ಲಿ ಭಾರತೀಯ ಗ್ರಾಹಕರ ಕುಂದು ಕೊರತೆ ನಿವಾರಣಾ ಅಧಿಕಾರಿಯಾಗಿ ಇತ್ತೀಚೆಗಷ್ಟೇ ನೇಮಕವಾಗಿದ್ದ ಧರ್ಮೇಂದ್ರ ಚತುರ್‌, ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

Advertisement

ಕೇಂದ್ರ ಸರ್ಕಾರದ ಐಟಿ ನಿಯಮದ ಪ್ರಕಾರ, ಭಾರತದಲ್ಲಿ ಕುಂದುಕೊರತೆ ನಿವಾರಣಾ ಅಧಿಕಾರಿಯನ್ನು ನೇಮಿಸುವುದು ಎಲ್ಲಾ ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ಕಡ್ಡಾಯವಾಗಿದೆ.

ಹಾಗಾಗಿ, ಟ್ವಿಟರ್‌ ಸಂಸ್ಥೆ ಚತುರ್‌ ಅವರನ್ನು ತನ್ನಲ್ಲಿ ನೇಮಿಸಿಕೊಂಡಿತ್ತು. ಐಟಿ ನಿಯಮಗಳನ್ನು ಪರಿಪೂರ್ಣ ಪಾಲನೆ ಮಾಡದ ಟ್ವಿಟರ್‌ ಹಾಗೂ ಕೇಂದ್ರ ಸರ್ಕಾರದ ನಡುವೆ ಕಾರ್ಮೋಡದ ವಾತಾವರಣ ಆವರಿಸಿರುವ ನಡುವೆಯೇ ಚತುರ್‌ ಅವರು ಹುದ್ದೆಯಿಂದ ನಿರ್ಗಮಿಸಿದ್ದಾರೆ. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಲು ಟ್ವಿಟರ್‌ ಕೂಡ ನಿರಾಕರಿಸಿದೆ.

ಇದನ್ನೂ ಓದಿ :ಯೋಧರ, ನಿವೃತ್ತರ ಸಮರ್ಪಣಾ ಭಾವ ಅನುಕರಣೀಯ : ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿಕೆ

Advertisement

Udayavani is now on Telegram. Click here to join our channel and stay updated with the latest news.

Next