Advertisement

ಲಕ್ಷದೀಪೋತ್ಸವದಲ್ಲಿ ಕಣ್ಣಿಗೆ ಬಿದ್ದದ್ದು ; ಶಕುನದ ಹಕ್ಕಿಯೊಂದಿಗೆ ಭವಿಷ್ಯ ನುಡಿವ ಸಿದ್ಧರು

09:51 AM Nov 25, 2019 | Hari Prasad |

ಅಲೆಮಾರಿ ಜನಾಂಗದವರು ನಮ್ಮ ಜನಮಾನಸದ ಒಂದು ಭಾಗವಾಗಿಯೇ ಹೋಗಿದ್ದಾರೆ. ಅವರು ತಮ್ಮ ಕುಲ ಕಸುಬನ್ನ ನಿಷ್ಠೆಯಿಂದ ಮಾಡುವಂತವರು. ಇಂತಹ ವೃತ್ತಿಯನ್ನು ಪಾಲಿಸುವವರಲ್ಲಿ ಗಿಣಿ ಶಾಸ್ತ್ರ ಹೇಳುವವರು ಕೂಡಾಒಬ್ಬರು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೀಪೋತ್ಸವದ ಆಚರಣೆಯಲ್ಲಿ ಕಂಡು ಬಂದ ಒಂದು ವೈಶಿಷ್ಟ್ಯಎಂದರೆ ಗಿಣಿಶಾಸ್ತ್ರ ಹೇಳುಗರು. ಇಲ್ಲಿಗೆ ಬಂದಿದ್ದ ಗಿಣಿಶಾಸ್ತ್ರದವರು ‘ಸುಡಗಾಡು ಸಿದ್ಧರು’ ಎಂಬ ಅಲೆಮಾರಿ ಜನಾಂಗಕ್ಕೆ ಸೇರಿದವರು. ತಲೆತಲಾಂತರದಿಂದಲೂ ಸಾಗಿ ಬಂದಿರುವ ಕುಲಕಸುಬಾದ ಗಿಣಿಶಾಸ್ತ್ರವನ್ನು ಹೇಳುತ್ತಿದ್ದಾರೆ.

ಲಕ್ಷ ದೀಪೋತ್ಸವದಲ್ಲಿ ಕಾಣಿಸಿಕೊಂಡಿದ್ದ ಗಿಣಿ ಶಾಸ್ತ್ರದವರು ಮೈಲಳ್ಳಿಯ ಚಿಳಿಕೆರೆ ತಾಲೂಕಿನ ಚಿತ್ರದುರ್ಗದವರು. ಪ್ರಸುತ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ನೆಲೆಸಿದ್ದಾರೆ. ತೆಲಗು ಹಾಗೂ ಕನ್ನಡ ಭಾಷೆ ಮಾತನಾಡುವ ಇವರು ಕಾಲಕ್ಕೆ ತಕ್ಕಂತೆ ಮುಂದುವರಿದು ಸ್ವಂತ ಮನೆ, ಜಮೀನನ್ನು ಹೊಂದಿದ್ದಾರೆ.


ಇವರದ್ದು ಕೇವಲ ಹೊಟ್ಟೆಪಾಡಿನ ಉದ್ಯೋಗವಷ್ಟೇ ಅಲ್ಲ. ಗಿಣಿ ಶಾಸ್ತ್ರ ಹೇಳುವುದು ತಲೆತಲಾಂತರದ ಸಂಪ್ರದಾಯ ಎನ್ನುವ ಕಾರಣಕ್ಕೆ ವರ್ಷದಲ್ಲಿ ಕೇವಲ ಎರಡು ತಿಂಗಳು ಮಾತ್ರ ಗಿಣಿ ಭವಿಷ್ಯ ಹೇಳುತ್ತಾರೆ. ಶಾಸ್ತ್ರ ಹೇಳಿ ಸಂಪಾದಿಸಿದ ಮೊತ್ತವನ್ನು ಶ್ರೀ ಸಿದ್ಧಾರೂಢ ಮಠಕ್ಕೆಅರ್ಪಿಸುತ್ತಾರೆ. ಇನ್ನುಳಿದ ಹತ್ತು ತಿಂಗಳು ಹಚ್ಚೆ ಹಾಕುತ್ತಾರೆ ಹಾಗೂ ಸ್ಟೇಷನರಿ ವಸ್ತುಗಳನ್ನು ಮಾರುತ್ತಾರೆ.

ನಾಲ್ಕು ತಲೆಮಾರಿನ ಜನ ಭವಿಷ್ಯ ಹೇಳುವುದನ್ನು ಮುಂದುವರೆಸಿದ್ದಾರೆ. ಜೊತೆಯಲ್ಲಿ ಮನೆಯ ಒಬ್ಬನೇ ಸದಸ್ಯ ಈ ವೃತ್ತಿಯಲ್ಲಿರಬಹುದು. ತಮ್ಮ ವೃತ್ತಿಯ ಪಾಲುದಾರನಾದ ಗಿಣಿಯನ್ನ ಚಿಕ್ಕಮರಿ ಇದ್ದಾಗಲೇ ಪಡೆದು ಅದಕ್ಕೆ ತರಬೇತಿ ನೀಡಲಾಗುತ್ತದೆ. ಭವಿಷ್ಯ ಹೇಳುವಾಗ ಗಿಣಿ ತನ್ನ ಯಜಮಾನನ ಆದೇಶದಂತೆ ಹಲವು ಕಾರ್ಡ್‌ಗಳಲ್ಲಿ ಒಂದನ್ನು ಆಯ್ದು ನೀಡಿ ಮತ್ತೆ ಪಂಜರ ಸೇರುತ್ತದೆ.


ಲಕ್ಷದೀಪೊತ್ಸವಕ್ಕೆ ಆಗಮಿಸಿದ್ದ ಜನರು ಗಿಣಿಶಾಸ್ತ್ರ  ಕೇಳಲು ಸಾಲಾಗಿ ಕುಳಿತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲವರು ಗಿಣಿರಾಮನ ಭವಿಷ್ಯ ಕೇಳಿ ತೃಪ್ತರಾಗಿ ಹೋದರೆ, ಇನ್ನು ಕೆಲವರು ಚಿಂತೆಯಲ್ಲಿ ಸಾಗಿದರು. ಸಾಲಾಗಿ ಕುಳಿತಿರುವ ಗಿಣಿಗಳು ನೋಡಲು ಆಕರ್ಷಕವಾಗಿತ್ತು.

ಗಿಣಿ ಶಾಸ್ತ್ರ ಹೇಳುವ ಸಂಪ್ರದಾಯ ನಮ್ಮ ಪೀಳಿಗೆಗೆ ಮುಕ್ತಾಯವಾಗುತ್ತದೆ. ನಾವು ಅನಕ್ಷರಸ್ಥರು. ಆದರೆ ನಮ್ಮ ಮಕ್ಕಳು ವಿದ್ಯೆ ಕಲಿತು ದೊಡ್ಡ ವ್ಯಕ್ತಿಗಳಾಗಬೇಕು. ಆದ್ದರಿಂದ ಅವರಿಗೆ ಈ ಕಸುಬನ್ನ ನಾವು ಹಸ್ತಾಂತರಿಸುವುದಿಲ್ಲ ಎಂಬುದು ಗಿಣಿ ಶಾಸ್ತ್ರ ಹೇಳುವವರ ಅಭಿಪ್ರಾಯವಾಗಿದೆ.

Advertisement

ವರದಿ: ವಾಣಿ ಭಟ್ ; ಚಿತ್ರಗಳು: ಸುರ್ವಣಾ ಹೆಗಡೆ

Advertisement

Udayavani is now on Telegram. Click here to join our channel and stay updated with the latest news.

Next