Advertisement

ದೇಶಭಕ್ತಿಯ ಸಂದೇಶ ಸಾರುವ ಯೋಧ ಧರ್ಮೋ ವರಂ ಕರ್ಮ

06:31 PM Nov 14, 2019 | mahesh |

ಕಥಾನಾಯಕಿ ಅಂಬಿಕೆ ಪಾತ್ರವನ್ನು ಸ್ವತಃ ರಕ್ಷಿತ್‌ ಶೆಟ್ಟಿ ನಿರ್ವಹಿಸಿ ಉತ್ತಮ ನಾಟ್ಯ , ಲಾಸ್ಯ , ಭಾವಾಭಿನಯದ ಮೂಲಕ ಪಾತ್ರದ ಘನತೆ ಹೆಚ್ಚಿಸಿದರು . ಶೃಂಗಾರ ,ಕರುಣ ರಸಗಳು ಉತ್ತಮವಾಗಿ ಪ್ರಸ್ತುತಗೊಂಡವು . ಕಥಾನಾಯಕನಾಗಿ ಕು| ಶಿವಾನಿ ಸುರತ್ಕಲ್‌ ಅವರ ನಿರ್ವಹಣೆ ಗಮನ ಸೆಳೆಯಿತು.

Advertisement

ಮೂಡಬಿದಿರೆಯ ಯಕ್ಷಗಾನ ಕಲಿಕಾ ಕೇಂದ್ರ ಧಿಗಿಣ ದಿವಿಜ ಇದರ ಪ್ರಥಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಸ್ತುತಗೊಂಡ ಪ್ರಸಾದ್‌ ಮೊಗೆಬೆಟ್ಟುರವರಿಂದ ರಚಿಸಲ್ಪಟ್ಟ “ಯೋಧ ಧರ್ಮೋ ವರಂ ಕರ್ಮ’ ಯಕ್ಷಗಾನ ನೃತ್ಯ ರೂಪಕದ ಪ್ರಥಮ ಪ್ರಯೋಗ ಯಶಸ್ವಿಯಾಯಿತು . ರಕ್ಷಿತ್‌ ಶೆಟ್ಟ ಪಡ್ರೆ ಪ್ರಧಾನ ಭೂಮಿಕೆಯಲ್ಲಿ ,ಸುಮಾರು 30ರಷ್ಟು ಶಿಷ್ಯರ ಸಾಂಗತ್ಯದ ಈ ಪ್ರಸ್ತುತಿ ಜನಮನ ಗೆಲ್ಲುವಲ್ಲಿ ಸಫ‌ಲವಾಯಿತು .

ಗಡಿಯಲ್ಲಿ ಕರ್ತವ್ಯ ನಿರತನಾಗಿರುವ ಅಮರನಾಥ ಎಂಬ ಯೋಧನು ರಜಾಕಾಲದಲ್ಲಿ ಕುದುರೆಯೇರಿ ಊರಿಗೆ ಬರುವಾಗ ಅಂಬಿಕೆ ಎಂಬ ಹುಡುಗಿಯಲ್ಲಿ ಅನುರಕ್ತನಾಗಿ ವಿವಾಹವಾಗುತ್ತಾನೆ . ತನ್ನ ಮಡದಿಯು ತುಂಬು ಗರ್ಭಿಣಿಯಾಗಿದ್ದು ಹೆರಿಗೆ ಸಮೀಪಿಸುವ ಸಂದರ್ಭದಲ್ಲಿಯೇ ಭಾರತಕ್ಕೆ ವೈರಿಗಳ ಆಕ್ರಮಣವಾಗಿ ಅಮರನಾಥನಿಗೆ ಸೈನ್ಯದಿಂದ ಕರೆ ಬರುತ್ತದೆ . ಅಮರನಾಥನಿಗೆ ಮಗುವನ್ನು ನೋಡಿಯೇ ಹೋಗಬೇಕೆಂಬ ಆಸೆಯಿದ್ದರೂ , ಅಂಬಿಕೆಯೇ ಸ್ವತಃ ಪತಿಗೆ ಖಡ್ಗವನ್ನು ನೀಡಿ , ಯೋಧರಿಗೆ ದೇಶ ಸೇವೆಯೇ ಪ್ರಥಮ ಕರ್ತವ್ಯ ಎಂದು ತಿಳಿ ಹೇಳಿ ಯುದ್ಧಕ್ಕೆ ಕಳಿಸುತ್ತಾಳೆ . ಇತರ ಸೈನಿಕರೊಂದಿಗೆ ಅಮರನಾಥನು ವೈರಿಗಳನ್ನು ಚೆಂಡಾಡುತ್ತಾನೆ . ಸೋತ ವೈರಿಗಳು ಹಿಂದಿನಿಂದ ಬಂದು ಅಮರನಾಥನನ್ನು ಇರಿದು ಕೊಲ್ಲುತ್ತಾರೆ .

ಅಂಬಿಕೆಯು ಗಂಡು ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲೇ ಅಮರನಾಥನ ವೀರಮಣದ ವಾರ್ತೆ ಬರಸಿಡಿಲಿನಂತೆ ಎರಗುತ್ತದೆ .ಅಂಬಿಕೆಯು ಪತಿವಿಯೋಗದಿಂದ ತೀವ್ರ ದುಃಖ ಪಟ್ಟು ಸಹಗಮನಕ್ಕೆ ಸಿದ್ಧಳಾದರೂ ದೇಶಪ್ರಜ್ಞೆ ಜಾಗ್ರತೆಗೊಳ್ಳುತ್ತದೆ . ತನ್ನ ನವಜಾತ ಶಿಶುವನ್ನು ಸಖೀಯರ ಬಳಿ ನೀಡಿ , ಆತನನ್ನು ಬೆಳೆಸಿ , ಮುಂದೆ ಭಾರತದ ಸೈನ್ಯಕ್ಕೆ ಸೇರಿಸಬೇಕು ಎಂದು ಹೇಳಿ ಚಿತೆಯನ್ನು ಪ್ರವೇಶಿಸಿ ದೇಹತ್ಯಾಗ ಮಾಡುತ್ತಾಳೆ . ಇವಿಷ್ಟು ಕಥಾನಕ ಹೊಂದಿರುವ ಯೋಧ ಧರ್ಮೋ ವರಂ ಕರ್ಮ ದೇಶಭಕ್ತಿಯ ಸಂದೇಶ ಸಾರುವಲ್ಲಿ ಯಶಸ್ವಿಯಾಯಿತು .

ಕಥಾನಾಯಕಿ ಅಂಬಿಕೆ ಪಾತ್ರವನ್ನು ಸ್ವತಃ ರಕ್ಷಿತ್‌ ಶೆಟ್ಟಿ ನಿರ್ವಹಿಸಿ ಉತ್ತಮ ನಾಟ್ಯ , ಲಾಸ್ಯ , ಭಾವಾಭಿನಯದ ಮೂಲಕ ಪಾತ್ರದ ಘನತೆ ಹೆಚ್ಚಿಸಿದರು . ಶೃಂಗಾರ ,ಕರುಣ ರಸಗಳು ಉತ್ತಮವಾಗಿ ಪ್ರಸ್ತುತಗೊಂಡವು . ಕಥಾನಾಯಕನಾಗಿ ಕು| ಶಿವಾನಿ ಸುರತ್ಕಲ್‌ ಅವರ ನಿರ್ವಹಣೆ ಗಮನ ಸೆಳೆಯಿತು .

Advertisement

ಸಖೀಯರಾಗಿ ಅಶ್ವಥ್‌ ಆಚಾರ್ಯ ಕೈಕಂಬ ಹಾಗೂ ಶ್ರವಣ ಆಚಾರ್ಯ ಸುರತ್ಕಲ್‌ರವರ ನಿರ್ವಹಣೆ ಉತ್ತಮವಾಗಿತ್ತು .ಮಂದಾರ ಮೂಡಬಿದಿರೆ ಸೇರಿದಂತೆ ಉಳಿದ ಕಲಾವಿದರ ಸಾಂ ಕ ಶ್ರಮವೂ ಪ್ರದರ್ಶನದ ಯಶಸ್ಸಿಗೆ ಪೂರಕವಾಯಿತು . ಹಿಮ್ಮೇಳದಲ್ಲಿ ತೆಂಕು – ಬಡಗು ತಿಟ್ಟುಗಳ ಕಲಾವಿದರ ಸಮನ್ವಯತೆಯನ್ನು ಚೆನ್ನಾಗಿ ಬಳಸಿದ್ದು ಕಂಡು ಬಂತು .ತೆಂಕಿನ ಭಾಗವತರಾಗಿ ಸತ್ಯನಾರಾಯಣ ಪುಣಿಚಿತ್ತಾಯ ಹಾಗೂ ಗಿರೀಶ್‌ ರೈ ಕಕ್ಕೆಪದವುರವರು ಸುಶ್ರಾವ್ಯವಾದ ಕಂಠದಿಂದ ಎದ್ದು ಕಂಡರು . ಮದ್ದಲೆಯಲ್ಲಿ ಶ್ರೀಧರ್‌ ವಿಟ್ಲ ಸಹಕರಿಸಿದರು. ಪದ್ಮನಾಭ ಉಪಾಧ್ಯಾಯರು ಅದ್ಭುತ ಕೈ ಚಳಕದಿಂದ ಕೊನೆಯವರೆಗೂ ಏಳು ಚೆಂಡುಗಳನ್ನು ನುಡಿಸಿ ಮೋಡಿ ಮಾಡಿದರು . ಬಡಗಿನ ಭಾಗವತಿಕೆಯಲ್ಲಿ ಯಕ್ಷಗಾನ ಪ್ರಸಾದ್‌ ಮೊಗೆಬೆಟ್ಟುರವರ ನಿರ್ವಹಣೆ ಮೆಚ್ಚುಗೆ ಮೂಡಿಸಿತು . ಮದ್ದಲೆಯಲ್ಲಿ ಶಶಿಕುಮಾರ್‌ ಆಚಾರ್ಯರು ವಿವಿಧ ಶ್ರುತಿಗಳ ಏಳು ಮದ್ದಲೆಗಳ ವಾದನದಿಂದ ಚಪ್ಪಾಳೆ ಗಿಟ್ಟಿಸಿದರು .ಚಕ್ರತಾಳದಲ್ಲಿ ರಾಜೇಂದ್ರಕೃಷ್ಣರು ಸಹಕರಿಸಿದರು .

ಪ್ರಾರಂಭದಲ್ಲೇ ಭಾರತ ಮಾತೆಯೊಂದಿಗೆ ವೀರ ಸೈನಿಕರು ಜಯಹೇ ಜಯಹೇ ಭಾರತ ಭಾಗ್ಯವತಿ ಯೋಧರ ಪುಣ್ಯಕ್ಷಿತಿ ಹಾಡನ್ನು ಕಕ್ಕೆಪದವುರವರು ಹಾಡಿದಾಗ ದೇಶಭಕ್ತಿಯ ಅನುಭವ ಮೂಡಿತು . ವಿರೋಧಿ ಸೈನಿಕರನ್ನು ಯಕ್ಷಗಾನದ ಪರಂಪರೆಯ ಐದು ಬಣ್ಣದ ವೇಷಗಳ ಮೂಲಕ ರಂಗಕ್ಕೆ ಬಳಸಿದ್ದುದು ಮೆಚ್ಚುಗೆ ಮೂಡಿಸಿತು . ಅಂಬಿಕೆಯ ನವಜಾತ ಶಿಶುವಾಗಿ ನೈಜ ಶಿಶುವನ್ನೇ ತಂದು ಎತ್ತಿ ಮು¨ªಾಡಿಸಿದ ನಾಟ್ಯವೂ ಮನ ಗೆದ್ದಿತು .

ಶೀರ್ಷಿಕೆ ಪದ್ಯವಾದ ಜಯಹೇ ಜಯಹೇ ಭಾರತ ಭಾಗ್ಯವತಿ , ವಂದೇ ಮಾತರಂ ಪದ್ಯಗಳು ಹೃದ್ಯವಾಗಿತ್ತು . ಅಡಿಯೆ ಮುಂದಿಡೆ ಸ್ವರ್ಗ , ಯೋಧನ ರಮಣಿ ಹಡೆದರೆ ಸ್ವರ್ಗ ಯೋಧನು ರಣದಿ ಮಡಿದರೆ ಸ್ವರ್ಗ , ಗೆಜ್ಜೆ ನಾದ ಹೆಜ್ಜೆ ಮೋದ ಮುಂತಾದ ಪದ್ಯಗಳು ಸನ್ನಿವೇಶಕ್ಕನುಗುಣವಾಗಿ ಹೆಣೆಯಲಾಗಿದೆ .

ಎಂ .ಶಾಂತರಾಮ ಕುಡ್ವ

Advertisement

Udayavani is now on Telegram. Click here to join our channel and stay updated with the latest news.

Next