Advertisement

ಹಿಂದೂ ಧರ್ಮ ವಿಜಯಪಥದತ್ತ ಸಾಗುತ್ತಿದೆ,ಗೋ ರಕ್ಷಣೆ ಅಗತ್ಯ; ತೊಗಾಡಿಯಾ

01:38 PM Nov 24, 2017 | Sharanya Alva |

ಉಡುಪಿ: ಮಂದಿರದ ಬಗ್ಗೆ ಹಿಂದೆಯೂ ಮಾತನಾಡಿದ್ದೇವೆ  ಮುಂದೆಯೂ ಮಾತನಾಡುತ್ತೇವೆ.ಹಿಂದೂ ಸಮಾಜ, ವಿಶ್ವದ ಒಳಿತಿಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲೇಬೇಕು.ರಾಮಮಂದಿರ ನಿರ್ಮಾಣ ವಿಚಾರದಲ್ಲಿ ಗೆಲುವು ನಿಶ್ಚಿತ ಎಂದು ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ.

Advertisement

ಉಡುಪಿಯ ಕಲ್ಸಂಕ ರೋಯಲ್ ಗಾರ್ಡನ್ ಆವರಣದಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ಧರ್ಮ ಸಂಸದ್ ಉದ್ಘಾಟನಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡುತ್ತ ಮಾತನಾಡಿದರು.

ಉಡುಪಿಯಲ್ಲಿ ಹಿಂದೂ ಧರ್ಮದ ದಿಗ್ಧರ್ಶನವಾಗಿದೆ. ಹಿಂದುತ್ವದ ಅಭಿಮಾನ ಇರುವವರು ಗೋವಿನ ಬಗ್ಗೆ ಮಾತನಾಡುತ್ತಾರೆ. ಗೋವಿನ ರಕ್ಷಣೆ ಬಗ್ಗೆ ಜಾಗೃತಿ ಅತ್ಯವಶ್ಯಕವಾಗಿದೆ. ಸಾಕಷ್ಟು ಹೋರಾಟ, ಬಲಿದಾನಗಳ ಬಳಿಕ ಹಿಂದೂ ಧರ್ಮ ವಿಜಯದತ್ತ ಸಾಗುತ್ತಿದೆ. ಹೀಗಾಗಿ ಧರ್ಮ ಸಂಸದ್ ಬಳಿಕ ಒಂದು ಹೆಜ್ಜೆ ಮುಂದಿಡಬೇಕು. ವಿಜಯ ಸಾಧಿಸದೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next