Advertisement

28ಕ್ಕೆ ಧಮ್ಮ ದೀಕ್ಷಾ-ಚಿಂತನಾ ಸಮಾವೇಶ

07:06 PM Feb 25, 2021 | Team Udayavani |

ಶಹಾಪುರ: ಕಲ್ಯಾಣ ಕರ್ನಾಟಕ ಭಾಗದ ದಲಿತ ಸಂಘಟನೆಗಳ ನಾಯಕರು, ಪದಾಧಿ ಕಾರಿಗಳು ಮತ್ತು ಕಾರ್ಯಕರ್ತರು, ಪ್ರಮುಖರು ಗಣ್ಯರು ಒಗ್ಗಟ್ಟಾಗಿ
ಸಾಮೂಹಿಕವಾಗಿ ಧಮ್ಮ ದೀಕ್ಷೆಯತ್ತ ಒಲವು ತೋರಿದಲ್ಲಿ ಪ್ರಬುದ್ಧ ಭಾರತ ನಿರ್ಮಾಣ ಸಾಧ್ಯ ಎಂದು ಬೌದ್ಧ ಸಾಹಿತಿ ದೇವೇಂದ್ರ ಹೆಗಡೆ ಅಭಿಪ್ರಾಯಪಟ್ಟರು.

Advertisement

ನಗರದಲ್ಲಿ ಫೆ.28 ರಂದು ನಡೆಯಲಿರುವ ಕಲಬುರಗಿ ವಿಭಾಗ ಮಟ್ಟದ ಬೌದ್ಧ ದೀಕ್ಷಾ ಮತ್ತು ಚಿಂತನಾ ಸಮಾವೇಶ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ವಿಶ್ವಕ್ಕೆ ವೈಜ್ಞಾನಿಕ ಬೆಳಕು, ವೈಚಾರಿಕ ಪ್ರಜ್ಞೆ ಮತ್ತು ಮಾನವೀಯ ಅನುಕಂಪದ ತಳಹದಿ ಮೇಲೆ ಮಾನವ ಕಲ್ಯಾಣದ ಬೌದ್ಧ ಧಮ್ಮ ಚಿಂತನೆಯನ್ನು ಎಲ್ಲರೂ ಮೈಗೂಡಿಸಿಕೊಂಡು ನಡೆಯಬೇಕಿದೆ. ಸಾಮೂಹಿಕ ನಾಯಕತ್ವ ಕಾರ್ಯಕ್ರಮದ ಯಶಸ್ಸಿಗೆ ಪೂರಕವಾಗಿದೆ ಎಂದರು.

ಆ ನಿಟ್ಟಿನಲ್ಲಿ ದಲಿತ ಸಂಘಟನೆಗಳ ನಾಯಕರು ಕೆಲಸ ಮಾಡಿದಲ್ಲಿ ಪ್ರಬುದ್ಧ ಭಾರತ ನಿರ್ಮಾಣವಾಗುವಲ್ಲಿ ಎರಡು ಮಾತಿಲ್ಲ. ನಮ್ಮ ನಡೆ ಬೌದ್ಧ ಧಮ್ಮದ ಕಡೆ
ಎನ್ನುವ ಘೋಷಣೆಯಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ನಡೆಯಬೇಕು.

ಧಮ್ಮ ದೀಕ್ಷಾ ಮತ್ತು ಧಮ್ಮ ಚಿಂತನಾ ಸಭೆ ಅತ್ಯಂತ ಮಹತ್ವದ್ದಾಗಿದೆ. ಈ ಸಭೆಯಲ್ಲಿ ಜನರು ಭಾಗವಹಿಸಿದ್ದಲ್ಲಿ ಅವರೆಲ್ಲರಲ್ಲಿ ಸಕಾರಾತ್ಮಕವಾಗಿ ಧಮ್ಮ
ಪ್ರಜ್ಞೆ ಮೂಡುವುದರಲ್ಲಿ ಸಂದೇಹವಿಲ್ಲ. ಇಂತಹ ಮಹತ್ವದ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆಯಿಂದ ಜನರು ವಂಚಿತವಾಗದಂತೆ ನೋಡಿಕೊಳ್ಳಬೇಕು ಎಂದು
ಸಲಹೆ ನೀಡಿದರು.

ಫೆ.28 ನಗರದ ಧಮ್ಮಗಿರಿ ಬೆಟ್ಟದ ಬುದ್ಧ ವಿಹಾರದಲ್ಲಿ ಬೃಹತ್‌ ಪ್ರಮಾಣದಲ್ಲಿ ನಡೆಯಲಿರುವ ಚಿಂತನಾ ಕಾರ್ಯಕ್ರಮಕ್ಕೆ ಕಲಬುರಗಿ ವಿಭಾಗ ಮಟ್ಟದ ಎಲ್ಲಾ ದಲಿತ ಸಂಘಟನೆಗಳ ಮುಖಂಡರು ಮತ್ತು ಆರು ಜನ ಪ್ರಬುದ್ಧ ವಿಹಾರದ ಬೌದ್ಧ ಧಮ್ಮ ಬಿಕ್ಕುಗಳು ಹಾಗೂ ಬಂತೋಜಿಯವರು ಆಗಮಿಸಲಿದ್ದಾರೆ.
ಅಂದು ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಸಂಜೆ 5 ಗಂಟೆವರೆಗೆ ಚರ್ಚೆ ಮತ್ತು ದೀಕ್ಷಾ ಸಮಾರಂಭ ಜರುಗಲಿದೆ. ಅಂದು ಪ್ರಗತಿಪರ ಹಿತ ಚಿಂತಕರು, ದಲಿತ ಮುಖಂಡರು, ಗಣ್ಯರು ಅಪಾರ ಸಂಖ್ಯೆಯಲ್ಲಿ ಡಾ.ಅಂಬೇಡ್ಕರ್‌ ಅಭಿಮಾನಿಗಳು, ಚಿಂತಕರು ಭಾಗವಹಿಸಲಿದ್ದಾರೆ. ದಲಿತ ಯುವ ಸಮೂಹ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

Advertisement

ದಲಿತ ಸಂಘಟನೆಗಳ ಮುಖಂಡರಾದ ಮಹಾದೇವ ದಿಗ್ಗಿ, ಅಶೋಕ ಹೊಸಮನಿ, ರಾಹುಲ್‌ ನಾಟೇಕಾರ, ಶರಣು ದೋರನಹಳ್ಳಿ, ಮೌನೇಶ ಬೀರನೂರ, ಗುರು ಬಾಣತಿಹಾಳ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next