Advertisement

ಧಾಬೋಲ್ಕರ್‌ ಹತ್ಯೆ ಆರೋಪಿಗೆ ಜಾಮೀನು

12:41 AM May 07, 2021 | Team Udayavani |

ಮುಂಬಯಿ: 2013ರಲ್ಲಿ ಪುಣೆಯಲ್ಲಿ ನಡೆದಿದ್ದ ವಿಚಾರವಾದಿ ನರೇಂದ್ರ ಧಾಬೋಲ್ಕರ್‌ ಹತ್ಯೆ ಪ್ರಕರಣದ ಆರೋಪಿ ವಿಕ್ರಮ್‌ ಭಾವೆಗೆ ಬಾಂಬೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ನೀಡಿದೆ.

Advertisement

ಯರವಾಡ ಕೇಂದ್ರ ಕಾರಾಗೃಹದಲ್ಲಿ ಬಂಧಿ ಯಾಗಿರುವ ಭಾವೆ 1 ಲಕ್ಷ ರೂ. ಮೊತ್ತದ ಬಾಂಡ್‌ ಸಲ್ಲಿಸಬೇಕಿದೆ. ಅನಂತರ  ಅವರಿಗೆ ಜಾಮೀನು ಸಿಗಲಿದೆ. ಕೋರ್ಟ್‌ ವಿಧಿಸಿರುವ ಷರತ್ತಿನನ್ವಯ, ಭಾವೆ ಯಾವುದೇ ಕಾರಣಕ್ಕೂ ಆತನ ವಿಚಾರಣೆ ನಡೆಯುತ್ತಿರುವ ನ್ಯಾಯಾಲಯದ ಗಡಿಯನ್ನು ದಾಟಿ ಹೋಗುವಂತಿಲ್ಲ.

ಜಾಮೀನಿನ ಮೇಲೆ ಹೊರಹೋದ ಅನಂತರ ತನ್ನ ಮನೆಗೆ ಸಮೀಪವಿರುವ ಪೊಲೀಸ್‌ ಠಾಣೆಯಲ್ಲಿ ಪ್ರತಿದಿನ ಒಂದು ವಾರದವರೆಗೆ ಸಹಿ ಹಾಕಬೇಕು. ಅನಂತರ ಎರಡು ತಿಂಗಳವರೆಗೆ ದಿನಕ್ಕೆರಡು ಬಾರಿ ಸಹಿ ಹಾಕಬೇಕು.

Advertisement

Udayavani is now on Telegram. Click here to join our channel and stay updated with the latest news.

Next