Advertisement

Tirupati ಲಡ್ಡು ಪ್ರಸಾದದ ಬಗ್ಗೆ ಈಗ ಭಕ್ತರಿಂದ ಮೆಚ್ಚುಗೆ: ಸಿಎಂ ನಾಯ್ಡು

01:27 AM Oct 06, 2024 | Team Udayavani |

ಅಮರಾವತಿ: ತಿರುಪತಿ ತಿರುಮಲ ದೇಗುಲದಲ್ಲಿ ಪ್ರಸಕ್ತ ನೀಡುತ್ತಿರುವ ಲಡ್ಡು ಪ್ರಸಾದದ ಗುಣಮಟ್ಟ ವನ್ನು ಭಕ್ತರು ಮೆಚ್ಚಿಕೊಂಡಿದ್ದಾರೆ. ಇದು ಹೀಗೆಯೇ ಮುಂದುವರಿಯಲಿ ಎಂದೂ ಆಶಿಸುತ್ತಿದ್ದಾರೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಹೇಳಿದ್ದಾರೆ.

Advertisement

ಲಡ್ಡು ಪ್ರಸಾದದಲ್ಲಿ ಪ್ರಾಣಿ ಜನ್ಯ ಕೊಬ್ಬು ಮಿಶ್ರಿತವಾಗಿದೆ ಎಂಬ ಆರೋಪ ವಿವಾದ ಸೃಷ್ಟಿಸಿದ ಬೆನ್ನಲ್ಲೇ ನಾಯ್ಡು ಅವರ ಈ ಹೇಳಿಕೆ ಮಹತ್ವ ಪಡೆದಿದೆ. ಟಿಟಿಡಿ ಅಧಿಕಾರಿಗಳೊಂದಿಗೆ ನಾಯ್ಡು ಪರಿಶೀಲನ ಸಭೆ ನಡೆಸಿದ್ದಾರೆ. ಈ ವೇಳೆ ಪ್ರಸಾದಕ್ಕೆ ಬಳಸುವ ಎಲ್ಲ ಪದಾರ್ಥಗಳು ಅತ್ಯುನ್ನತ ಗುಣಮಟ್ಟದ್ದು ಎಂಬುದನ್ನು ಖಾತರಿ ಪಡಿಸಿ ಕೊಳ್ಳುವಂತೆ ಸೂಚಿಸಿದ್ದಾರೆ. ಜತೆಗೆ ತಿರುಮಲದಲ್ಲಿ ಟಿಟಿಡಿ ನಿರ್ಮಿಸಿರುವ ವಾಕುಲಮಾತಾ ಕೇಂದ್ರೀಕೃತ ಅಡುಗೆ ಮನೆಗೂ ಅವರು ಚಾಲನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next